ರಿಯಾದ್: ವಲಸಿಗರ ಪ್ರಯಾಣ ಸಮಸ್ಯೆಯನ್ನು ಪರಿಹರಿಸಲು ಭಾರತ-ಸೌದಿ ಏರ್ ಬಬಲ್ ಒಪ್ಪಂದ ಇಂದಿನಿಂದ ಜಾರಿಗೆ ಬಂದಿದೆ. ರಾಜ್ಯದ ಬೆಂಗಳೂರು ಸೇರಿದಂತೆ ಕೇರಳದ, ಕೋಝಿಕ್ಕೋಡ್ ಮತ್ತು ಕೊಚ್ಚಿ ಸಹಿತ ಭಾರತದ ಎಂಟು ವಿಮಾನ ನಿಲ್ದಾಣಗಳಿಗೆ ಮತ್ತು ಸೌದಿ ಅರೇಬಿಯಾದ ನಾಲ್ಕು ವಿಮಾನ ನಿಲ್ದಾಣಗಳಿಗೆ ಶೀಘ್ರದಲ್ಲೇ ವಿಮಾನಗಳನ್ನು ಪ್ರಾರಂಭಿಸಲಾಗುವುದು ಎಂದು ಭಾರತೀಯ ರಾಯಭಾರಿ ಅವ್ಸಾಫ್ ಸಯೀದ್ ರಿಯಾದ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೌದಿಯಿಂದ ಕೋಝಿಕ್ಕೋಡ್, ಕೊಚ್ಚಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಲಕ್ನೋ, ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳಿಗೆ ಈ ಸೇವೆ ಲಭ್ಯವಿದೆ.
ಭಾರತದಿಂದ ರಿಯಾದ್, ಜಿದ್ದಾ , ಮದೀನಾ ಮತ್ತು ದಮ್ಮಾಮ್ ವಿಮಾನ ನಿಲ್ದಾಣಗಳಿಗೆ ವಿಮಾನಯಾನ ಇರಲಿದೆ. ಸೇವೆಯನ್ನು ಯಾವಾಗಿನಿಂದ ಪ್ರಾರಂಭಿಸಲಿದ್ದಾರೆ ಎಂಬುದನ್ನು ಸೌದಿ ಮತ್ತು ಭಾರತೀಯ ನಾಗರಿಕ ವಿಮಾನಯಾನ ಅಧಿಕಾರಿಗಳು ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ. ಸೌದಿ ಅರೇಬಿಯಾಕ್ಕೆ ಆಗಮಿಸುವ ಪ್ರಯಾಣಿಕರು ಹೋಟೆಲ್ ಕ್ವಾರಂಟೈನ್ ಸೇರಿದಂತೆ ಕೆಲವು ಷರತ್ತುಗಳನ್ನು ಅನುಸರಿಸಬೇಕು ಎಂದು ರಾಯಭಾರಿ ಹೇಳಿದರು.







