ಬಂಟ್ವಾಳ: ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ವ್ಯಾಪ್ತಿಯ ನಾಯಕರ ಸಂಗಮವು ಡಿಸೆಂಬರ್ 17 ಶುಕ್ರವಾರ ಪಾಣೆ ಮಂಗಳೂರು ಎಸ್ ಎಸ್ ಆಡಿಟೋರಿಯಂ ನಲ್ಲಿ ನಡೆಯಿತು ಸುಮಾರು 25 ಗ್ರಾಮಗಳಿಂದ ಹಲವಾರು ಪ್ರತಿನಿಧಿಗಳು ಭಾಗವಹಿಸಿದ್ದರು.
ತಾಲೂಕು ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ಯವರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಾಗಾರವನ್ನು ಸಹಾಯ್ ಜಿಲ್ಲಾ ಕೋ ಆರ್ಡಿನೇಟರ್ ಕೆ ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಅನ್ವರ್ ಹಾಜಿ ಗೂಡಿನ ಬಳಿ ಸ್ವಾಗತಿಸಿದರು,ಮುಸ್ಲಿಂ ಜಮಾಅತ್ ರಾಜ್ಯ ಚುನಾವಣಾ ಸಮಿತಿ ಕನ್ವೀನರ್ ಎಂ ಬಿ ಮುಹಮ್ಮದ್ ಸಾದಿಖ್ ಮಾಸ್ಟರ್ ಮಲೆಬೆಟ್ಟು ವಿಷಯಮಂಡಿಸಿದರು.
ರಾಜ್ಯ ಸುನ್ನೀ ಜಂಇಯ್ಯತ್ತುಲ್ ಉಲಮಾ ಮುಶಾವರ ಸದಸ್ಯ ರಾದ ಅಬೂಬಕ್ಕರ್ ಸುನ್ನಿ ಪೈಝಿ ಉಸ್ತಾದ್, ಎಸ್ ಕೆ ಖಾ

ದರ್ ಹಾಜಿ ಮುಡಿಪು , ಮುಸ್ಲಿಂ ಜಮಾಅತ್ ಸಹಾಯ್ ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಮಂಗಳೂರು.ತಾಲೂಕು ಸದಸ್ಯರಾದ ಎಸ್ ಎಂ ಬಷೀರ್ ಹಾಜಿ ಕುಂಬ್ರ, ರಷೀದ್ ಹಾಜಿ ವಗ್ಗ ,ಸುಲೈಮಾನ್ ಹಾಜಿ ಮಾಣಿ, ಮುಂತಾದವರು ಉಪಸ್ಥಿತರಿದ್ದರು,ತಾಲೂಕು ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.







