ಅರ್ಧ ಶತಕಕ್ಕೂ ಹೆಚ್ಚು ಕಾಲ ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ಶಕ್ತಿಯಾಗಿ ನಿಂತು ದಕ್ಷಿಣ ಕರ್ನಾಟಕದಾದ್ಯಂತ ದೀನೀ ಪ್ರಭೆಯನ್ನು ಹರಡಿದ ಸಯ್ಯಿದುನಾ ತಾಜುಲ್ ಉಲಮಾ ರವರ ಅನುಗ್ರಹೀತ ನಾಮದೊಂದಿಗೆ ಸ್ಥಾಪಿಸಲ್ಪಟ್ಟ ತಲಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ವತಿಯಿಂದ ತಾಜುಲ್ ಉಲಮಾರ 8 ನೇ ಆಂಡ್ ನೇರ್ಚೆ ಹಾಗೂ ಎಲ್ಲಾ ಜನರ ಮನ ಸೆಳೆದ ಕಾಂತಪುರಂ ಅಬ್ದುಲ್ಲತೀಫ್ ಸಖಾಫಿ ನೇತೃತ್ವ ನೀಡುವ ಮದನೀಯಂ ಕಾರ್ಯಕ್ರಮವು ನವಂಬರ್ 25 ಗುರುವಾರ ಸಂಜೆ 6:00 ಗಂಟೆಗೆ ಸಯ್ಯಿದ್ ಶಿಹಾಬುದ್ದೀನ್ ಮಶ್ಹೂರ್ ತಂಙಳ್ ರವರ ನೇತೃತ್ವದಲ್ಲಿ ತಲಕ್ಕಿಯಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚಯರ್ಮೇನ್ ಮೌಲಾನಾ ಶಾಫಿ ಸಅದಿ ಬೆಂಗಳೂರುರವರನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಧಾರ್ಮಿಕ,ಸಾಮಾಜಿಕ ಉಲಮಾ,ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಜನರಲ್ ಕನ್ವೀನರ್ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








