janadhvani

Kannada Online News Paper

ಹರಿಹರದಲ್ಲಿ ಎಸ್ಸೆಸ್ಸೆಫ್ ನೋರ್ತ್ ಅರ್ಧವಾರ್ಷಿಕ ಕೌನ್ಸಿಲ್ ರಿವ್ಯೂ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ನ ನೋರ್ತ್ ವಲಯದ ಅರ್ಧವಾರ್ಷಿಕ ಕೌನ್ಸಿಲ್ ರಿವ್ಯೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗರವರ ಅಧ್ಯಕ್ಷತೆಯಲ್ಲಿ ದಾರುಲ್ ಇಹ್ಸಾನ್ ಎಜ್ಯುಕೇಶನ್ ಸೆಂಟರ್ ಹರಿಹರದಲ್ಲಿ ನಡೆಯಿತು.

ಎಸ್ಸೆಸ್ಸೆಪ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕೌನ್ಸಿಲನ್ನು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ,ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಮಾತನಾಡಿದರು.

ರಾಜ್ಯ ಕಾರ್ಯದರ್ಶಿಗಳಾದ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಪ್ರತಿಭೋತ್ಸವದ ಮಾಹಿತಿ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಸಫ್ವಾನ್ ಚಿಕ್ಕಮಂಗಳೂರು,ವಾಜಿದ್ ಹಾಸನ ಹಾಗೂ ರಾಜ್ಯ ನಾಯಕರಾದ ರವೂಫ್ ಖಾನ್ ಕುಂದಾಪುರ,ಜುನೈದ್ ಸಖಾಪಿ ಚಿತ್ರದುರ್ಗ,ಯಾಸೀನ್ ಸಖಾಫಿ ಹರಿಹರ,ಎಸ್ಸೆಸ್ಸೆಪ್ ದಾವಣಗೆರೆ ಜಿಲ್ಲಾಧ್ಯಕ್ಷ ಅಬ್ದುಲ್ ಕದೀರ್ ಹಾಗೂ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಖಾದರ್ ಪಾಷಾ ದಾವಣಗೆರೆ ಸ್ವಾಗತಿಸಿದರು.ಅಬ್ದುಲ್ ಹಮೀದ್ ದಾವಣಗೆರೆ ವಂದಿಸಿದರು.