janadhvani

Kannada Online News Paper

ಟಿಪ್ಪು ಗೈಝ್ ಗೋಳಿಕಟ್ಟೆ,ಕನ್ಯಾನ: ರಂಝಾನ್ ಕಿಟ್ ವಿತರಣೆ

ಕನ್ಯಾನ ಮತ್ತು ಪರಿಸರದ ನಾಡಿನ ಬಡ,ಅನಾಥ ನಿರ್ಗತಿಕರ ಸಹಾಯಾರ್ಥವಾಗಿ ಕಾರ್ಯಾಚರಿಸುತ್ತಿರುವ ಟಿಪ್ಪು ಗೈಝ್ ಗೋಳಿಕಟ್ಟೆ ವತಿಯಿಂದ ನಾಡಿನ ಸುಮಾರು 50 ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.

ಏ.26 ಸೋಮವಾರದಂದು, ಸರಕಾರದ ಕೋವಿಡ್ ಮಾರ್ಗದರ್ಶನಗಳನ್ನು ಪಾಲಿಸಿಕೊಂಡು ಗೋಳಿಕಟ್ಟೆಯಲ್ಲಿರುವ ಟಿಪ್ಪು ಗೈಝ್ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶೈಖುನಾ ಕನ್ಯಾನ ಉಸ್ತಾದರು ದುಆ ನಡೆಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಕೆ.ಎಂ ಅಶ್ರಫ್ ಸಖಾಫಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ನಡೆಸಿದರು. ಈ ಸಂದರ್ಭದಲ್ಲಿ ಊರಿನ ಹಲವು ಧಾರ್ಮಿಕ ಮುಖಂಡರು, ಗಣ್ಯ ಅತಿಥಿಗಳು ,ಸಂಘಟನೆ ಕಾರ್ಯಕರ್ತರು ಹಾಜರಿದ್ದರು.