janadhvani

Kannada Online News Paper

ಸ್ನಾನಕ್ಕೆಂದು ನದಿಗಿಳಿದ ನೆಲ್ಯಾಡಿಯ ಯುವಕರಿಬ್ಬರು ಮೃತ್ಯು

ಕಡಬ,ಏ.19: ಇಲ್ಲಿಗೆ ಸಮೀಪದ ಇಚ್ಲಂಪಾಡಿ ಎಂಬಲ್ಲಿ ಇಂದು ಸಂಜೆ ಸ್ನಾನಕ್ಕೆಂದು ನದಿಗಿಳಿದು ನೆಲ್ಯಾಡಿಯ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನೆಲ್ಯಾಡಿಯ ಶಾಂತಿಬೆಟ್ಟು ನಿವಾಸಿ ಉಮರ್ ಅವರ ಪುತ್ರ ಝಾಕಿರ್(20) ಹಾಗೂ ಉಮರ್ ಅವರ ಸಹೋದರಿ ಸರಳಿಕಟ್ಟೆ ಅಸ್ಮಾ ಅವರ ಪುತ್ರ ಸಿನಾನ್ ಮೃತಪಟ್ಟ ಯುವಕರಾಗಿದ್ದಾರೆ.

ಮೃತ ಯುವಕರು ಸ್ನಾನಕ್ಕೆಂದು ಇಚಿಲಂಪಾಡಿ ಸೇತುವೆ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ನೀರಿಗಿಳಿದು ಇಬ್ಬರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.