janadhvani

Kannada Online News Paper

ತಾಜುಶ್ಶರೀಅಃ ಅಲೀಕುಂಞಿ ಉಸ್ತಾದರ ಅಗಲಿಕೆ ತುಂಬಲಾರದ ನಷ್ಟ: ಎಸ್ಸೆಸ್ಸೆಫ್

ಮಂಗಳೂರು: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ,ಸೂಫಿವರ್ಯರೂ ಆದ ಉಸ್ತಾದುಲ್ ಅಸಾತಿದೀನ್ ಅಲೀ ಕುಂಞಿ ಉಸ್ತಾದರ ಅಗಲಿಕೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಮರ್ಹೂಂ ತಾಜುಲ್ ಫುಖಹಾಅ್ ಸಹಿತವಿರುವ ಹಲವಾರು ಉಲಮಾ ದಿಗ್ಗಜರನ್ನು ಸಮೂಹಕ್ಕೆ ಅರ್ಪಿಸಿದ, ಶರೀಅತ್ತಿನ ಕಿರೀಟವೆಂಬ ಖ್ಯಾತಿಗೆ ಅರ್ಹರಾಗಿದ್ದ ಶೈಖುನಾರ ಅಗಲಿಕೆಯು ಸಮುದಾಯಕ್ಕ ತುಂಬಲಾರದ ನಷ್ಟವಾಗಿದೆ. ಅವರ ಹೆಸರಿನಲ್ಲಿ ಖುರ್ಆನ್ ಪಾರಾಯಣ, ತಹ್ಲೀಲ್ ಹಾಗೂ ಪ್ರತ್ಯೇಕ ದುಆ ನಡೆಸುವಂತೆಯೂ ತಮ್ಮ ಸಂತಾಪದಲ್ಲಿ ಸೂಚಿಸಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ,ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕಾರ್ಯದರ್ಶಿಗಳಾದ ನೌಫಲ್ ಸಖಾಫಿ ಕಳಸ, ಕೆ.ಎಂ ಮುಸ್ತಫಾ ನಯೀಮಿ ಹಾವೇರಿ,ಮುಬಶ್ಶಿರ್ ಅಹ್ಸನಿ ಕೊಡಗು,ಎನ್.ಸಿ ರಹೀಂ ಉಡುಪಿ, ವಾಜಿದ್ ಹಾಸನ ಮೊದಲಾದವರು ಉಸ್ತಾದರ ಜನಾಝ ಸಂದರ್ಶಿಸಿದರು.