ಬೆಳ್ತಂಗಡಿ: ಸಪ್ಟಂಬರ್ 19 ಶನಿವಾರ ಕರ್ನಾಟಕ ರಾಜ್ಯಾಧ್ಯಂತ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಸ್ಫಾಪಿತಗೊಂಡು 32 ವರ್ಷ ಪೂರ್ಣಗೊಂಡಾಗ ಸ್ಥಾಪಕ ದಿನದ ಅಂಗವಾಗಿ ರಾಜ್ಯಾಧ್ಯಂತ ನಡೆಯುತ್ತಿರುವ ವಿಜೃಂಭಣೆಯ ಧ್ವಜರೋಹಣ ಕಾರ್ಯಕ್ರಮವು RJM ಖತೀಬ್ ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ನಾವೂರ್ ರವರ ಪ್ರಾರ್ಥನೆಯೊಂದಿಗೆ ಅಳಕೆ ಮದ್ರಸ ವಠಾರದಲ್ಲಿ SSF ಅಳಕೆ ಶಾಖೆಯ ಅಧ್ಯಕ್ಷರಾದ ಗಫೂರ್ ರವರ ಘನ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ನಡೆಯಿತು.

ಸಿರಾಜುಲ್ ಮದ್ರಸಾ ಅಳಕೆ ಸದರ್ ಮುಅಲ್ಲಿಂ ಮುಸ್ತಫಾ ಹಿಮಮಿ ಪರಪ್ಪು ಸಂದೇಶ ಭಾಷಣ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ RJM ಅಧ್ಯಕ್ಷರಾದ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಪುಂಡಿಕು, SSF ಪ್ರಧಾನ ಕಾರ್ಯದರ್ಶಿ ಶಮೀರ್, ಜೊತೆ ಕಾರ್ಯದರ್ಶಿ ಸುಫಿಯಾನ್, SBS ಅಧ್ಯಕ್ಷರಾದ ಇಸ್ಮಾಯಿಲ್, ಸಿರಾಜುಲ್ ಇಸ್ಲಾಂ ಮದ್ರಸಾ ಮುಖ್ಯಮಂತ್ರಿ ಅವ್ಸಾಫ್ ಮುಂತಾದ SSF, SYS, SBS ಕಾರ್ಯಕರ್ತರು ಉಪಸ್ಥಿತರಿದ್ದರು. ಸವಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






