ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ವಿರುದ್ಧ ದೇಶಾದ್ಯಂತ ಮುಸ್ಲಿಮರೆಲ್ಲರೂ ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಅಮಾಯಕ ಉಸ್ತಾದೊಬ್ಬರ ವಿರುದ್ಧ ಸುಳ್ಳು ಕೇಸು ದಾಖಲಿಸಿರುವ ಮಂಗಳೂರು ಖಾಝಿಯವರ ನಡೆಯು ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಮಂಗಳೂರು ಖಾಝಿಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶವೊಂದನ್ನು ಸುನ್ನೀ ಉಭಯ ಬಣಗಳ ನಾಯಕರು ಮಾತ್ರವಿರುವ ಗ್ರೂಪ್ ಗೆ ಕಳುಹಿಸಿ ಇದರ ಸತ್ಯಾಸತ್ಯತೆಯ ಬಗ್ಗೆ ಕೇಳಿದ ಮೆಸೇಜನ್ನು ಮುಂದಿಟ್ಟು ಮಂಗಳೂರು ಖಾಝಿಗಳು ತನ್ನ ಕಛೇರಿ ಸಿಬ್ಬಂದಿಯ ಮೂಲಕ ಸುಳ್ಳು ಕೇಸು ದಾಖಲಿಸಿ ಹಸನ್ ಝುಹ್ರಿ ಮಂಗಳಪೇಟೆಯವರ ಕುಟುಂಬದ ಕಣ್ಣೀರಿಗೆ ಕಾರಣವಾಗಿದ್ದು ಖಂಡನೀಯ.
ಮೊಕದ್ದಮೆಯಲ್ಲಿ ಐಪಿಸಿಯ ವಿವಿಧ ಕಲಂಗಳನ್ನು ಉಲ್ಲೇಖಿಸಲಾಗಿದ್ದು ದೇಶದ್ರೋಹ( ಮೂರು ವರ್ಷಗಳ ಜಾಮೀನು ರಹಿತ ಆರೋಪ) ಮುಂತಾದ ಗಂಭೀರ ಸೆಕ್ಷನ್ ಗಳನ್ನು ಹೊರಿಸಲಾಗಿದ್ದು ಸಮುದಾಯದ ನಾಯಕಸ್ಥಾನದಲ್ಲಿರುವವರು ಮಾಡಬೇಕಾದ ಕೆಲಸವಲ್ಲ.
ಸಮುದಾಯದ ಮದ್ಯೆ ಉಂಟಾಗುವ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕಾದ ಖಾಝಿಗಳೇ ತನ್ನ ಪ್ರಭಾವ ಬಳಸಿ ಸುಳ್ಳು ಕೇಸು ಹಾಕಿದ್ದು ಅತ್ಯಂತ ಖಂಡನೀಯವಾಗಿದೆ ಎಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






