ರಿಯಾದ್: ಕೊಡಗಿನ ಅನಿವಾಸಿಗಳ ಹೆಮ್ಮೆಯ ಸಂಘಟನೆಯಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಶನ್ (KSWA) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಬುರೈದ ಝೋನ್ ನೂತನ ಸಮಿತಿಯನ್ನು 26/12/2019 ಗುರುವಾರ ರಂದು ಬುರೈದ ಲತೀಫ್ ಕೊಟ್ಟಮುಡಿ ರವರ ವಿಲ್ಲಾದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
ರಾಷ್ಟ್ರೀಯ ಸಮಿತಿ ಸಲಹಾ ಸಮಿತಿ ಚೆಯರ್ಮ್ಯಾನ್ ಸಯ್ಯಿದ್ ಅಬ್ದುಲ್ ಕಾದರ್ ತಂಙಳ್ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಷ್ಟ್ರೀಯ ಸಮಿತಿ ನೇತಾರರಾದ ಸಯ್ಯಿದ್ ರಫೀಖ್ ತಂಙಳ್ ಮಾಲ್ದಾರೆ ಉದ್ಘಾಟಿಸಿದರು.
ನಂತರ ನಡೆದ ಸ್ವಲಾತ್ ಮಜ್ಲಿಸ್ ಹಾಗೂ ಕೊಟ್ಟಮುಡಿ ಸಜ್ಜಾದ್ ಮುಸ್ಲಿಯಾರ್ ರವರ ಹೆಸರಿನಲ್ಲಿ ತಹ್ ಲೀಲ್ ಸಮರ್ಪಣೆ ಹಾಗೂ ಮಯ್ಯತ್ ನಮಾಝಿಗೆ ಸಯ್ಯಿದ್ ಅಬ್ದುಲ್ ಕಾದರ್ ತಂಙಳ್ ನೇತ್ರತ್ವ ವಹಿಸಿದರು.
KSWA ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ವಿಷಯ ಮಂಡಿಸಿ ನಂತರ ನೂತನ ಸಮಿತಿಯನ್ನು ರಚಿಸಿಸಲಾಯಿತು.
*ನೂತನ ಸಮಿತಿ*
===========
ಅಧ್ಯಕ್ಷರು: ಲತೀಫ್ ಕೊಟ್ಟಮುಡಿ
ಉಪಾಧ್ಯಕ್ಷರು: ಇಬ್ರಾಹೀಂ ಮುಸ್ಲಿಯಾರ್ (ಹಾಕತ್ತೂರು) ಷೌಕತ್ತ್ (ಕುಂಜಿಲ)
ಪ್ರಧಾನ ಕಾರ್ಯದರ್ಶಿ:ಬಷೀರ್ (ಕುಂಜಿಲ)
ಕಾರ್ಯದರ್ಶಿಗಳು:ಅಬೂಬಕ್ಕರ್ (ನೆಲ್ಲಿಹುದಿಕೇರಿ) ಹಸೈನಾರ್ (ಬೇತ್ರಿ)
ಕೋಶಾಧಿಕಾರಿ: ಮುಸ್ತಫ (ಕಲ್ಲುಬಾಣೆ)
ರಿಲೀಫ್ ಚೆಯರ್ಮೇನ್:ಶಾದುಲಿ (ಕೊಮ್ಮತ್ತೋಡ್)
ಬಷೀರ್ ಕುಂಜಿಲ ಸ್ವಾಗತಿಸಿ ವಂದಿಸಿದರು.






