ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಮೃತ ಪಟ್ಟ ಸಂತ್ರಸ್ತರ ಕುಟುಂಬಸ್ಥರಿಗೆ ಮತ್ತು ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಘೋಷಿಸಿದ್ದ ಪರಿಹಾರ ಧನವನ್ನು ತಡೆ ಹಿಡಿದಿರುವ ಹೇಳಿಕೆ ನೀಡಿರುವುದು ತೀವ್ರ ವಿಷಾದನೀಯ.
ಮತೀಯ ಆಧಾರದಲ್ಲಿ ಸಂತ್ರಸ್ತರನ್ನು ವಿಭಜಿಸಿ ಹೇಳಿಕೆ ನೀಡುವ ಮನಸ್ಥಿತಿ ದುರಂತಮಯ. ಗೋಲಿಬಾರ್ ಮೃತರು ಮತ್ತು ಗಾಯಾಳು ಸಂತ್ರಸ್ತರು ಕೋಮು ಮನಸ್ಥಿತಿ ಆಡಳಿತದ ಯಾವುದೇ ರೂಪದ ಪರಿಹಾರವನ್ನು ಸಂಪೂರ್ಣವಾಗಿ ನಿರಾಕರಿಸಬೇಕಿದೆ. ಹಾಗೂ ಜಾತ್ಯಾತೀತ ಚಿಂತನೆ , ಸಾಹೋದರತ್ವ ಉದಾರ ದಾನಿಗಳು , ಪ್ರಗತಿ ಪರ ಚಿಂತಕರು ನೀಡಲ್ಪಡುವ ಎಷ್ಟೇ ಕಿರು ಮೊತ್ತದ ಪರಿಹಾರವನ್ನಾದರೂ ಸಂತ್ರಸ್ತರು ಮತ್ತು ಗಾಯಾಳುಗಳು ಧನ್ಯ ಮನಸಿನಿಂದ ಸ್ವೀಕರಿಸಿ ಸ್ವಾಭಿಮಾನವನ್ನು ಸಂರಕ್ಷಿಸ ಬೇಕೆಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ವಿನಂತಿಸುತ್ತಿದೆ.
ಕೆ.ಅಶ್ರಫ್ (ಮಾಜಿ ಮೇಯರ್)
ಅಧ್ಯಕ್ಷರು: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
ಮಂಗಳೂರು






