janadhvani

Kannada Online News Paper

ಏಲಕ್ಕಿ ನಗರದಲ್ಲಿ ಮಧ್ಯ ಕರ್ನಾಟಕ Q team ZACVIK ಯಶಸ್ವಿ

ರಾಣಿಬೆನ್ನೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಕ್ರೀಯ ಕಾರ್ಯಕರ್ತರ ತಂಡ Q team ಇದರ ಕಾರ್ಯಕರ್ತರ ಸಮಾವೇಶ Zacvik ಏಲಕ್ಕಿ ನಗರ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಯಶಸ್ವಿಯಾಗಿ ನಡೆಯಿತು.‌

ಎಸ್ಸೆಸ್ಸೆಫ್ ರಾಜ್ಯ ನಾಯಕ ಮಿಡ್ಲ್ ಝೋನ್ ಸಂಚಾಲಕ ಮೌಲಾನಾ ಆದಂ ಹಝ್ರತ್ ಚಿತ್ರದುರ್ಗ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ರಾಜ್ಯ ನಾಯಕ ಖಾದರ್ ಭಾಷಾ ದಾವಣಗೆರೆ ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಎಸ್ಸೆಸ್ಸೆಫ್ಫಿನ ಕ್ರಾಂತಿಕಾರಿ ಹೆಜ್ಜೆಗಳು ಭವಿಷ್ಯದ ಗುರಿಗಳ ಬಗ್ಗೆ ವಿಷಯ ಮಂಡನೆ ಮಾಡಿದರು.

ಸಯ್ಯಿದ್ ಅತ್ಹರ್ ಸಖಾಫಿ ಹಾವೇರಿ, ರಾಜ್ಯ ನಾಯಕ ಸಫ್ವಾನ್ ವಿಜಯಪುರ, ಅಶ್ರಫ್ ಸಖಾಫಿ ಹರಿಹರ, ಯಾಸೀನ್ ಸಖಾಫಿ ಹಾವೇರಿ, ಶರೀಫ್ ಸಖಾಫಿ ಹರಿಹರ, ಇಂಜಿನಿಯರ್ ಶುಹೈಬ್ ಗೋಕಾಕ್, ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ, ಜುನೈದ್ ಸಖಾಫಿ ಚಿತ್ರದುರ್ಗ, ಅಬೂಬಕ್ಕರ್ ಜಗಳೂರು, ಝುಬೈರ್ ಸಖಾಫಿ ಗದಗ ಹಾಗೂ ಮಧ್ಯ ಕರ್ನಾಟಕದ ಐದು ಜಿಲ್ಲೆಗಳ ಡಿಸ್ಟ್ರಿಕ್ಟ್ ಡೈರೆಕ್ಟರ್ ಗಳು ಡಿವಿಷನ್ ಕಂಟ್ರೋಲರ್ ಗಳು ಭಾಗವಹಿಸಿದರು.