janadhvani

Kannada Online News Paper

ಕುವೈತ್ ನಲ್ಲಿ ಮರಣ ಹೊಂದಿದ ಮರ್ಹ್ಹೂಮ್ ಬಾವಾಕ ರವರ ಮನೆಗೆ KCF INC ಅಧ್ಯಕ್ಷರು ಭೇಟಿ

ಇತ್ತೀಚೆಗೆ ಕೋವಿಡ್ ನಿಂದ ಮರಣ ಹೊಂದಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ kcf ಕುವೈತ್ ರಾಷ್ಟ್ರೀಯ ಸಮಿತಿಗೆ ಒಳಪಟ್ಟ ಸಿಟಿ ಸೆಕ್ಟರ್ ಸದಸ್ಯರಾದ ಮರ್ಹ್ಹೂಮ್ ಬಾವಾಕ ನೆಜಾರ್ ಅವರ ಮನೆಗೆ KCF ಇಂಟರ್ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರು ಜನಾಬ್, ಡಾ:ಶೇಕ್ ಬಾವ ಹಾಜಿ ಮಂಗಳೂರು ಭೇಟಿ ನೀಡಿದರು.

ಕುವೈತ್ KCF ನಾಯಕರಾದ ಬಹು/ಬಾದುಷ ಸಖಾಫಿ, ಹಮೀದ್ ಕಾಶಿಪಟ್ಣ, ಅಹ್ಮದ್ ಬಾವಕ ಕುಪ್ಪೆ ಪದವು, ದಾವೂದ್ ಹಕೀಮ್ ಸೂರಿಂಜೆ ಮುಂತಾದವರು ಜೊತೆಗಿದ್ದರು.

ಕುವೈಟ್ KCF ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು/ಅಬ್ದುಲ್ ರಹ್ಮಾನ್ ಸಖಾಫಿ ಹಾಗೂ ರಾಷ್ಟ್ರೀಯ ಸಾಂತ್ವಾನ ವಿಭಾಗದ ಅಧ್ಯಕ್ಷರಾದ ಜನಾಬ್ /ಯಾಕೂಬ್_ _ಕಾರ್ಕಳ ಮತ್ತು ಜನಾಬ್ /ಇಕ್ಬಾಲ್ ಕಂದಾವರ ಅವರ ನೇತ್ರತ್ವದಲ್ಲಿ ಕುವೈಟ್ KCF ರಾಷ್ಟ್ರೀಯ ಸಾಂತ್ವಾನದ ಮರ್ಹ್ಹೂಮ್ ಸಹಾಯ ನಿಧಿಯನ್ನು ಮರ್ಹ್ಹೂಮ್ ಬಾವಕ ಅವರ ಕುಟುಂಬಕ್ಕೆ ನೀಡಲಾಯಿತು.