janadhvani

Kannada Online News Paper

ಎಸ್.ವೈ.ಎಸ್.ಬಳ್ಳಾರಿ ಜಿಲ್ಲೆ: ನವಾಝ್ ಹಾಜಿ ,ಅಝ್ಮತುಲ್ಲಾಹ್ ಸಾರಥಿಗಳು

ಬಳ್ಳಾರಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ಬಳ್ಳಾರಿ ಜಿಲ್ಲಾ ಸಮಾವೇಶವು ಕಂಪ್ಲಿ ಸಮುದಾಯ ಭವನದಲ್ಲಿ ನಡೆಯಿತು.

ಎಸ್.ವೈ.ಎಸ್. ಉತ್ತರ ಕರ್ನಾಟಕ ಅಧ್ಯಕ್ಷ ಮೌಲಾನಾ ಅಬೂಸುಫ್ಯಾನ್ ಮದನಿ ಅಧ್ಯಕ್ಷ ತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಉದ್ಘಾಟಿಸಿದರು.ಜಿಲ್ಲೆಯ ನೂತನ ಅಧ್ಯಕ್ಷರಾಗಿ ಹಾಜಿ ನವಾಝ್ ಬಳ್ಳಾರಿ ಉಪಾಧ್ಯಕ್ಷರಾಗಿ ನದಾಫ್ ರಫೀಖ್ ವಿಶಾಲನಗರ, ದೂದ್ ಅಹ್ಮದ್ ಸಾಹೆಬ್ ಹೂವಿನ ಹಡಗಲಿ, ಮುಹಮ್ಮದ್ ರಫೀಖ್ ಸಖಾಫಿ ಬಳ್ಳಾರಿ, ಪ್ರಧಾನ ಕಾರ್ಯದರ್ಶಿಯಾಗಿ ಅಝ್ಮತುಲ್ಲಾಹ್ ಖಾನ್ ಕಂಪ್ಲಿ, ಕಾರ್ಯದರ್ಶಿಗಳಾಗಿ ಮೆಹ್ಬೂಬ್ ಹೆಮ್ಮಿಗನೂರ್, ಹೊನ್ನೂರ್ ಸಾಬ್ ಕಪ್’ಗಲ್, ಯೂಸುಫ್ ತೆಕ್ಕಲ್ ಕೋಟೆ,ಕೋಶಾಧಿಕಾರಿ ಯಾಗಿ ಹುಸೈನ್ ಸಾಹೆಬ್ ಕುಡಿತಿನಿ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶೇಖ್ ಅಹ್ಮದ್ ದೇವಳಾಪುರ, ಕೆ.ಸಲೀಂ ಕಂಪ್ಲಿ, ಇಮಾಂ ಸಾಬ್ ಹೂವಿನ ಹಡಗಲಿ, ನಬೀ ಸಾಬ್ ತೆಕ್ಕಲ್ಕೋಟೆ, ಅಲ್ಲಾ ಭಕ್ಚ್ ಜಾಲಿಬೆಂಚಿ, ಅಶ್ರಫ್ ಸಾಯಿ ದರ್ಬಾರ್, ಮಲಂಗ್ ಸಾಬ್ ಕುರುಗೋಡ್, ಮುಹಮ್ಮದ್ ತೌಸೀಫ್ ಕಂಪ್ಲಿ, ವಾರದ ಗೌಸ್ ಹೂವಿನ ಹಡಗಲಿ, ಶೈಖ್ ಅಹ್ಮದ್ ಸಾಹೆಬ್ ಹೂವಿನ ಹಡಗಲಿ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಲ್ ಸುಫ್ಯಾನ್ ಸಖಾಫಿ, ಎಸ್‌ ವೈ ಎಸ್ ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ಎ‌.ಇಬ್ರಾಹಿಂ ಸಖಾಫಿ ಶುಭ ಹಾರೈಸಿದರು

error: Content is protected !! Not allowed copy content from janadhvani.com