ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SYS)ಇದರ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ವೈ ಎಸ್ ಅರಬನ ವಳವೂರು ಶಾಖೆಯ ನೂತನ ಸಮಿತಿಯ ರಚನೆ ಮತ್ತು ಅಧ್ಯಯನ ತರಗತಿ ಜ. 21ರಂದು ರಾತ್ರಿ, ಎಸ್ಸೆಸ್ಸೆಫ್ ಮಂಗಳೂರು ಡಿವಿಶನ್ ಮಾಜಿ ಅಧ್ಯಕ್ಷರಾದ ಮನ್ಸೂರ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಅರಬನ ವಳವೂರು ಶಾಖಾ ಕಚೇರಿಯಲ್ಲಿ ನಡೆಯಿತು.
ಎಸ್ ವೈ ಎಸ್ ಜಿಲ್ಲಾ ಪ್ರ.ಕಾರ್ಯದರ್ಶಿ ಅಶ್ರಫ್ ಕಿನಾರ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೀಖ್ ಸಖಾಫಿ ಮೂಳೂರು ಹಾಗು ಹಲವಾರು ಉಲಮಾ ಉಮರಾಗಳು ಭಾಗವಹಿಸಿದ್ದರು.ಎಸ್ ವೈ ಎಸ್ ಅರಬನ ವಳವೂರು ಶಾಖೆಯ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ವಿ.ಎ.ಮುಹಮ್ಮದ್ ಸಖಾಫಿ ವಳವೂರು ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಹಾಗು ಇಖ್ಬಾಲ್ ಮುಈನಾಬಾದ್ ಪ್ರ.ಕಾರ್ಯದರ್ಶಿಯಾಗಿ ಉಮರ್ ಮುಈನಾಬಾದ್ ಜೊತೆ ಕಾರ್ಯದರ್ಶಿಗಳಾಗಿ ಸಿದ್ದೀಖ್ ಸಖಾಫಿ ಹಾಗೂ ಹಂಝ ವಳವೂರು ಮತ್ತು ಕೋಶಾಧಿಕಾರಿಯಾಗಿ ಅಬ್ದುಲ್ ರಹೀಂ ವಳವೂರು ಹಾಗೂ ಮೂವತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಎಸ್.ವೈ.ಎಸ್ ಜಿಲ್ಲಾ ನೇತಾರರು ಉಪಸ್ಥಿತರಿದ್ದರು.