janadhvani

Kannada Online News Paper

ಪ್ರವಾದಿ (ಸ.ಅ) ನಿಂದನೆ:ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ನಿಂದ ದೂರು ದಾಖಲು

ಉಳ್ಳಾಲ:ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ಮಾಡುವ ರೀತಿಯಲ್ಲಿ ಮಾಧ್ಯಮದ ಸಿದ್ದಾಂತಕ್ಕೆ ಅಗೌರವ ತೋರಿ,ಮುಸ್ಲಿಮರ ಭಾವನಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರು ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಅಧ್ಯಕ್ಷ ರಫೀಕ್ ಮದನಿ ಪಾನೆಲ ರವರ ನೇತೃತ್ವದಲ್ಲಿ ಕೋಣಾಜೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.

ಈ ಸಮಯದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ,ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಅಧ್ಯಕ್ಷರು ರಫೀಕ್ ಮದನಿ ಪಾನೇಲ, ಪ್ರ. ಕಾರ್ಯದರ್ಶಿ ಸಿರಾಜ್ ಅಮ್ಮೆಂಬಳ, ಕೋಶಾಧಿಕಾರಿ ಇಸಾಕ್ ಮಧ್ಯನಡ್ಕ, ಕಾರ್ಯದರ್ಶಿ ನೌಫಲ್ ಪಾನೇಲ, ಕ್ಯಾಂಪಸ್ ಕಾರ್ಯದರ್ಶಿ CTM ಜುನೈದ್ ತಂಙಳ್, ಇಕ್ಬಾಲ್ ಮಧ್ಯನಡ್ಕ, ಶರೀಫ್‌ ಪಾನೇಲ, ಸಲೀಂ ತಂಙಳ್, ಖಲಂದರ್ ಶಾ ಸ‌ಅದಿ ಪಾನೇಲ, ಅಶ್ರಫ್ ಮದನಿ ಪಾನೇಲ, ಇಲ್ಯಾಸ್ ಪಾನೇಲ ಮೊದಲಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com