ಕಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಪ್ರತಿನಿಧಿ ಸಮಾವೇಶ “ಕೈರೋಸ್ – 18” ಡಿಸೆಂಬರ್ 16ರಂದು ಅನ್ಸಾರಿಯಾ ಸಭಾಂಗಣದಲ್ಲಿ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಜುನೈದ್ ಸಖಾಫಿ ಅಧ್ಯಕ್ಷತೆಯಲ್ಲಿ ಅನ್ಸಾರಿಯ ಕೇಂದ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಜನತಾ ಪ್ರತಿನಿಧಿ ಸಮಾವೇಶ ಉದ್ಘಾಟಿಸಿದರು. ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ, ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ಸಯನ್ಸ್ ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಸಂಘಟನಾ ತರಬೇತಿ ನಡೆಸಿದರು. ಅನ್ಸಾರಿಯಾ ಮುದರ್ರಿಸ್ ಅಬೂಬಕರ್ ಹಿಮಮಿ ಸಖಾಫಿ ದುಆ ನೆರವೇರಿಸಿದರು.
ನಂತರ ಸೆಕ್ಟರ್ ಸಮಿತಿಯ ವಾರ್ಷಿಕ ಮಹಾಸಭೆಯು ನಡೆಯಿತು. ಪ್ರ.ಕಾರ್ಯದರ್ಶಿ ವರದಿ ವಾಚಿಸಿ, ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಅಬ್ದುಲ್ಲ ಝುಹ್ರಿ ಮೊಗರ್ಪಣೆ(ಅಧ್ಯಕ್ಷರು), ಸಿದ್ದೀಖ್ ಗೂನಡ್ಕ, ಸ್ವಾದಿಖ್ ಪಿ.ಜಿ(ಉಪಾಧ್ಯಕ್ಷರು), ಮಾಲಿಕ್ ಕುಂಭಕ್ಕೋಡು(ಪ್ರ.ಕಾರ್ಯದರ್ಶಿ), ಸ್ವಾದಿಖ್ ಕಲ್ಲುಗುಂಡಿ(ಕ್ಯಾಂಪಸ್ ಕಾರ್ಯದರ್ಶಿ), ಅಝೀಝ್ ಏಣಾವರ, ಬಶೀರ್ ಕಲ್ಲುಮುಟ್ಲು(ಕಾರ್ಯದರ್ಶಿಗಳು), ಸಿದ್ದೀಖ್ ಹಿಮಮಿ ಸಖಾಫಿ ಪೈಂಬಚ್ಚಾಲು(ಕೋಶಾಧಿಕಾರಿ) ಹಾಗೂ ಸ್ವಬಾಹ್ ಹಿಮಮಿ ಸಖಾಫಿ ಬೀಜಕೊಚ್ಚಿ, ಆಸಿಫ್ ಪೈಂಬಚ್ಚಾಲ್, ಸಿದ್ದೀಖ್ ಪಿ.ಎ, ನಾಸಿರ್ ವೈ.ಎಚ್, ಶಬೀಬ್ ಗುತ್ತಿಗಾರು, ಶಾಕಿರ್ ಮೊಗರ್ಪಣೆ, ಅಬ್ದುರ್ರಹೀಂ ಪೈಂಬಚ್ಚಾಲು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದರು.
ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಶಮೀರ್ ಮೊಗರ್ಪಣೆ, ಅನ್ಸಾರಿಯ ಪ್ರ.ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಲತೀಫ್ ಸಖಾಫಿ ಗೂನಡ್ಕ, ಪ್ರ. ಕಾರ್ಯದರ್ಶಿ ಇಬ್ರಾಹೀಂ ಅಮ್ಜದಿ, ಪದಾಧಿಕಾರಿಗಳಾದ ಫೈಝಲ್ ಝುಹ್ರಿ, ಕಲಾಂ ಝುಹ್ರಿ, ಹಸೈನಾರ್ ಗುತ್ತಿಗಾರು, ಅಬ್ಬಾಸ್ ಎ.ಬಿ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಮಾಜಿ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕಾರ್, ಕೆ.ಸಿ.ಎಫ್ ನಾಯಕರಾದ ಸ್ವಾದಿಕ್ ಮೊಗರ್ಪಣೆ, ಇರ್ಶಾದ್ ಅಡ್ಕಾರ್, ರಝೀನ್ ಅಡ್ಕಾರ್ ಮುಂತಾದ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪ್ರ. ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಮಾಲಿಕ್ ಕೊಯಂಗಿ ವಂದಿಸಿದರು.