ಪಮಂಜೇಶ್ವರ: ಮಚ್ಚಂಪಾಡಿ ಕೇರಳ ಮುಸ್ಲಿಂ ಜಮಾಅತಿನ ನೇತ್ರತ್ವದಲ್ಲಿ ಮಳ್ಹರ್ ಮುದರ್ರಿಸ್ ಉಮರುಲ್ ಫಾರೂಕ್ ಮದನಿ ಮಚ್ಚಂಪಾಡಿಯವರ “ಹಿಕಂ ದರ್ಸ್” ಇದರ ಎರಡನೇ ವಾರ್ಷಿಕ ದ ಅಂಗವಾಗಿ ವಿದ್ವಾಂಸರಿಗಾಗಿ ಸಂಘಟಿಸುವ ಪಡನ ಕ್ಲಾಸ್ ಡಿಸಂಬರ್ 20 ಗುರುವಾರ ಬೆಳಿಗ್ಗೆ 11 ಗಂಟೆಗೆ ಮಚ್ಚಂಪಾಡಿ ಸಿ ಎಂ ನಗರ ಸುನ್ನೀ ಮಸ್ಜಿದ್ ನಲ್ಲಿ ನಡೆಯಲಿದೆ.
ಖ್ಯಾತ ವಿದ್ವಾಂಸರೂ ಸಯ್ಯಿದ್ ಪೂಸೋಟ್ ತಂಙಳ್ (ನಮ) ರವರ ಪ್ರಮುಖ ಶಿಷ್ಯರಲ್ಲೂಬ್ಬರಾದ ಹಂಝಕೋಯ ಬಾಖವಿ ಕಡಲುಂಡಿ ನೇತ್ರತ್ವ ನೀಡುವರು. SYS ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಉದ್ಘಾಟಿಸುವರು. ಅಬ್ದುಲ್ ಹಮೀದ್ ಮದನಿ ಅಧ್ಯಕ್ಷ ತೆ ವಹಿಸುವರು. ಉಮರುಲ್ ಫಾರೂಕ್ ಮದನಿ, ರಫೀಖ್ ಮದನಿ ಅಲ್-ಖಾಮಿಲ್, ಮೂಸಲ್ ಮದನಿ ಪುಚ್ಚತ್ತಬೈಲ್, ಸುಲೈಮಾನ್ ಸಅದಿ, ಅಝೀಝ್ ಸಖಾಫಿ, ಖಲೀಲ್ ಅಹ್ಸನಿ ಮುಂತಾದವರು ಬಾಗವಹಿಸುವರು.