janadhvani

Kannada Online News Paper

ಸುರಿಬೈಲ್ ನಲ್ಲಿ SჄS ದ ಕ ಜಿಲ್ಲಾ ಅಸೆಂಬ್ಲಿ

ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SჄS)
ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಯು ಕಳೆದ ಮೂರು ತಿಂಗಳಿಂದ ಬ್ರಾಂಚ್, ಸೆಂಟರ್ ಮತ್ತು ಝೋನ್ ಗಳಲ್ಲಿ ಅಸೆಂಬ್ಲಿ ಕಾರ್ಯಕ್ರಮ ನಡೆದು ಆದಿತ್ಯ ವಾರ ಅಪರಾಹ್ನ 2.00 ಘಂಟೆ ಗೆ ಬಂಟ್ವಾಳ ತಾಲೂಕಿನ ಸುರಿಬೈಲ್ ದಾರುಲ್ ಅಶ್ಹರಿಯ್ಯಾ ವಿಧ್ಯಾ ಕೇಂದ್ರ ದಲ್ಲಿ ಜಿಲ್ಲಾ ಅಸೆಂಬ್ಲಿ ನಡೆಯಿತು. . ಪ್ರಸ್ತುತ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಘಟಕಗಳ ಆಹ್ವಾನಿತ ನಾಯಕರು ಭಾಗವಹಿಸಿದರು . ಸುರಿಬೈಲ್ ಉಸ್ತಾದ್ ಝಿಯಾರತ್ ನೊಂದಿಗೆ ಪ್ರಾರಂಭ ವಾದ ಕಾರ್ಯಕ್ರಮ ವು
ಜಿಲ್ಲಾ ದ್ಯಕ್ಷ ಪಿ ಎಂ ಉಸ್ಮಾನ್ ಸಅಧಿ ಪಟ್ಟೋರಿ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನ್ನಿ ಪೈಝಿ ದುಆ ನೆರವೇರಿಸಿ ರಾಜ್ಯ ನಾಯಕರಾದ ತೋಕೆ ಕಾಮಿಲ್ ಸಖಾಫಿ ಉದ್ಘಾಟಿಸಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ಕಿನ್ಯ ತಂಙಲ್ , ಬನ್ನೂರು ತಂಙಲ್,*ಡಿ ಎಚ್ ಸಅದಿ ರಾಜ್ಯ ನಾಯಕರಾದ ಡಿ ಕೆ ಉಮರ್ ಸಖಾಫಿ, KKM ಕಾಮಿಲ್ ಸಖಾಫಿ, ಮಂಗಳೂರು 4 ಝೋನ್ ಅಧ್ಯಕ್ಷರುಗಳಾದ ಅಶ್ಹರಿಯ್ಯಾ ಸಖಾಫಿ. ಹಂಝ ಮದನಿ, ಮಜೂರು ಸಅಧಿ, ಎಸ್ ಎಮ್ ತಂಙಲ್ ಹಾಗೂ ಹನೀಪ್ ಹಾಜಿ , ಖಾಸಿಂ ಪದ್ಮುಂಜೆ,, ಉಮರ್ ಮಾಸ್ಟರ್, ಹಮೀದ್ ಸಅದಿ, ಸಾಮನಿಗೆ ಮದನಿ, ಉರುಮನೆ ಸಅದಿ, ಎಂ ಚ್ ಖಾದರ್, ಬಷೀರ್ ಹಾಜಿ, ಖಾಸಿಂ ಹಾಜಿ , ಮುತ್ತಲಿಬ್ ಹಾಜಿ , ಪುತ್ತುಬಾವ ಹಾಜಿ. ಹಮೀದ್ ಕೊಡುಂಗೈ ಜಿಲ್ಲಾ ಕೌನ್ಸಿಲರ್ ಗಳು, ಝೋನ್ ಕಾರ್ಯಕಾರಿಣಿ ಸದಸ್ಯರು,31 ಸೆಂಟರ್ ಗಳ ಕಾರ್ಯಕಾರಿಣಿ ಸದಸ್ಯರು, 293 ಬ್ರಾಂಚ್ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಗಳು ಭಾಗವಹಿಸಿದ್ದ ರು.
ಸಮಾರೋಪ ದುಆ ಸಮಸ್ತ ಉಪಾಧ್ಯಕ್ಷ ಆಲಿಕುಂಞ ಉಸ್ತಾದ್ ನೆರವೇರಿಸಿದರು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಸ್ವಾಗತಿಸಿ ಖಲೀಲ್ ಕಾವೂರು ಕಾರ್ಯಕ್ರಮ ನಿರೂಪಿಸಿದರು .



error: Content is protected !! Not allowed copy content from janadhvani.com