ಕೊಣಾಜೆ ಡಿ.13: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಇದರ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಬದ್ರಿಯಾ ನಗರ ಶಾಖೆಯ ಮಹಾಸಭೆಯು ಮಸ್ಜಿದುರ್ರಹ್ಮ ಮಲಾರಿನಲ್ಲಿ ನಡೆಯ್ತು.
ಕೊಣಾಜೆ ಸೆಕ್ಟರ್ ನಾಯಕರಾದ ನೌಫಲ್ ಫರೀದ್ ನಗರ ರವರ ನೇತೃತ್ವದಲ್ಲಿ 2018-019 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು.
ನೂತನ ಶಾಖಾ ಅಧ್ಯಕ್ಷರಾಗಿ ತಸ್ಲೀಂ ನಡುಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಜಬ್ಬಾರ್ ಬದ್ರಿಯಾ ನಗರ, ಕೋಶಾಧಿಕಾರಿಯಾಗಿ ಶರಫತ್ ಮಲಾರ್ ಪದವು, ಉಪಾಧ್ಯಕ್ಷರಾಗಿ ಇಸ್ಹಾಕ್ ನಡುಗಡ್ಡೆ, ನೌಫಲ್ ಬದ್ರಿಯಾ ನಗರ ಕಾರ್ಯದರ್ಶಿಯಾಗಿ ರಿಯಾಝ್ ನಡುಗುಡ್ಡೆ, ರಫೀಖ್ ಬದ್ರಿಯಾ ನಗರ , ಕಾಲೇಜು ಕ್ಯಾಂಪಸ್ಸ್ ಕನ್ವೀನರ್ ಸಮದ್ ಬದ್ರಿಯಾ ನಗರ, ಎಸ್ ಬಿ ಎಸ್ ಕನ್ವೀನರಾಗಿ ಜುನೈದ್ ಬದ್ರಿಯಾ ನಗರ ಸೆಕ್ಟರ್ ಕೌನ್ಸಿಲರ್ ಗಳಾಗಿ ಹನ್ನೆರೆಡು ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಲೀತ್,ಮಕ್ಸೂದ್, ಉಬೈದ್, ಮಿಫ್ತಾಹ್ ಮತ್ತಿತರು ಉಪಸ್ಥಿತರಿದ್ದರು.ನೌಫಲ್ ಬದ್ರಿಯಾ ನಗರ ಸ್ವಾಗತಿಸಿ ನಿರೂಪಿಸಿದರು.