janadhvani

Kannada Online News Paper

ಎಸ್ಸೆಸ್ಸೆಫ್ ಕೊಡಂಗಾಯಿ ಶಾಖೆಯ ವಾರ್ಷಿಕ ಕೌನ್ಸಿಲ್ ಸಭೆ

ವಿಟ್ಲ : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ [ರಿ] SSF ಕೊಡಂಗಾಯಿ ಶಾಖಾ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆಯು ಕೊಡಂಗಾಯಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಕೆ.ಅಬ್ದುಲ್ ಲತೀಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಡಿವಿಷನ್ ಕಾರ್ಯದರ್ಶಿ ಅಶ್ಫಾಕ್ ಟಿಪ್ಪುನಗರ ಉದ್ಘಾಟಸಿದರು. SSF ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ಹಾಜೀ ಸಲೀಂ ಬೈರಿಕಟ್ಟೆ ಸಂಘಟನಾ ತರಗತಿ ನಡೆಸಿದರು.ಸಭೆಯಲ್ಲಿ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಎಂ.ಕೆ.ಅಬ್ದುಲ್ ರಝಾಖ್ ಕೊಡಂಗಾಯಿ, ಉಪಾಧ್ಯಕ್ಷರುಗಳಾಗಿ ಡಿ.ಎ.ಮುಹಮ್ಮದ್ ಅಶ್ರಫ್ ಹಾಗೂ ಇಲ್ಯಾಸ್ ಕರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಮೀರ್ ಕರ್ಕಳ, ಕಾರ್ಯದರ್ಶಿಗಳಾಗಿ ನಿಝಾಂ.ಬಿಕ್ನಾಜೆ ಹಾಗೂ ಎಂಕೆ ಮುಹಮ್ಮದ್ ರಮೀಝ್ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಸಲೀಂ ಪಿ.ಯವರನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳನ್ನು ಒಳಗೊಂಡಂತೆ 17 ಮಂದಿ ಸದಸ್ಯರ ಕಾರ್ಯಾಕಾರಿ ಸಮಿತಿಯನ್ನು ರಚಿಸಲಾಯಿತು.ಕಾರ್ಯಕ್ರಮದಲ್ಲಿ ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷರಾದ ಸಿ.ಹೆಚ್.ಅಬ್ದುಲ್ ಖಾದರ್, ಸೆಕ್ಟರ್ ನಾಯಕರಾದ ಕಲಂದರ್ ಕಾಂತಡ್ಕ, ಫಾರೂಖ್ ಕಡಂಬು, ಶರೀಫ್ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಎಂ.ಕೆ.ತಮೀಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಶಮೀರ್.ಕೆ ವಂದಿಸಿದರು.

error: Content is protected !! Not allowed copy content from janadhvani.com