janadhvani

Kannada Online News Paper

ಕೆಸಿಎಫ್ ದುಬೈ ನಾರ್ತ್ ಝೋನ್ ಬೃಹತ್ ಮೀಲಾದ್ ಸಮಾವೇಶ.

ದುಬೈ: ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನಾರ್ತ್ ಝೋನ್ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನದ ಪ್ರಯುಕ್ತ ” ಓ ಸಂದೇಶವಾಹಕರೇ ತಮ್ಮೆಡೆಗೆ” ಅನ್ನುವ ಘೋಷವಾಕ್ಯದಡಿಯಲ್ಲಿ ನಡೆಸಲಿರುವ ಬ್ರಹತ್ ಮೀಲಾದ್ ಸಮಾವೇಶ ಇದೇ ಬರುವ ಶುಕ್ರವಾರ (ನವೆಂಬರ್- 16) ಸಂಜೆ 5:30ಕ್ಕೆ ಸರಿಯಾಗಿ ದುಬೈ ಅಲ್ ಖಿಸೈಸ್ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಹತ್ತಿರದ ಕ್ರೆಸೆಂಟ್ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಲಿದೆ.

ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ ಉದ್ಘಾಟನೆ ಮಾಡಲಿದ್ದಾರೆ.
ನೌಫಲ್ ಸಖಾಫಿ ಕಳಸ “ಪ್ರವಾದಿ ಪ್ರೇಮ” ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯೂ ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಮುಶಾವರ ಸಮಿತಿ ಸದಸ್ಯರಾದ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ದುವಾಶೀರ್ವಚನ ಗೈಯ್ಯಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿಎಂಹೆಚ್ ಅಬ್ದುಲ್ ಹಮೀದ್ ಈಶ್ವರಮಂಗಳ,   ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ನಾಯಕರಾದ
ಹಾಜಿ ಶೈಖ್ ಬಾವಾ ಮಂಗಳೂರು, ಶೇಖ್ ಸಲಾಹ್ ಮೂಸಾ ಹಸನ್ ಅಲ್ ಮದನಿ,ಡಾ:ಎಸ್ ರಫೀಕ್ ಅಹ್ಮದ್ ಮಾಜಿ ಶಾಸಕರು ತುಮಕೂರು ಮತ್ತು ಎಂ ನಝೀರ್ ಅಡ್ಮಿಶನ್ ಆಫೀಸರ್ ಹೆಚ್ ಎಂ ಎಸ್ ಇನ್ಸ್ಟಿಟೂಟ್ ಟೆಕ್ನಾಲಜಿ ತುಮಕೂರುಆಗಮಿಸಲಿದ್ದಾರೆ.

ಸಂಜೆ 5:30 ಗಂಟೆಗೆ ಸರಿಯಾಗಿ ಅಬ್ದುಲ್ ಅಝೀಝ್ ಲತೀಫಿ ಮತ್ತು ಅಬ್ದುಲ್ ಅಝೀಝ್ ಅಹ್ಸನಿಯವರ ನೇತೃತ್ವದಲ್ಲಿ ಮೌಲಿದ್ ನಡೆಯಲಿದ್ದು ತದ ನಂತರ ಅನ್ಸಾರ್ ಮುಕ್ವೆ ತಂಡದವರಿಂದ ಬುರ್ದಾ ಆಲಾಪನೆ ಮತ್ತು ಕೆಸಿಎಫ್ ದುಬೈ ಸೌತ್ ಝೋನ್ ತಂಡದಿಂದ ದಫ್ ಕಾರ್ಯಕ್ರಮ ನಡೆಯಲಿದೆ.
ಆದುದರಿಂದ ಅನಿವಾಸಿ ಕನ್ನಡಿಗರಾದ ಎಲ್ಲಾ ಮುಸ್ಲಿಂ ಬಾಂಧವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮೀಲಾದ್ ಸ್ವಾಗತ ಸಮಿತಿ ಚೆಯರ್ಮಾನ್ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ..
ಖಲಂದರ್ ಕಬಕ, ಅಬ್ದುಲ್ ಅಝೀಝ್ ಲತೀಫಿ, ಅಬ್ದುಲ್ ಕಾದರ್ ಸಾಲೆತ್ತೂರು, ಹಂಝ ಎಮ್ಮೆಮಾಡು,ಸಮದ್ ಬೀರಾಳಿ,ಇಸ್ಮಾಯಿಲ್ ಮದನಿನಗರ
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

*ವಿ ಸೂ : ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶವಿದೆ*
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
0503139568
0559565153

error: Content is protected !! Not allowed copy content from janadhvani.com