janadhvani

Kannada Online News Paper

ನವೆಂಬರ್ 9:ಮರಿಕ್ಕಳದಲ್ಲಿ ತಾಜುಲ್ ಫುಖಹಾ ಶೈಖುನಾ ಬೇಕಲ್ ಉಸ್ತಾದರಿಗೆ ಹುಟ್ಟೂರ ಸನ್ಮಾನ

ಮೊಂಟೆಪದವು:ಮರಿಕ್ಕಳ ಜುಮಾ ಮಸ್ಜಿದ್ ಹಾಗೂ ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಜುಲ್ ಫುಖಹಾಹ್ ಶೈ ಖುನಾ ಖಾಝಿ ಬೇಕಲ್ ಉಸ್ತಾದರಿಗೆ ಹುಟ್ಟೂರ ಸನ್ಮಾನ ಹಾಗೂ ಯೂನಿಟ್ ಸಮ್ಮೇಳನ ಕಾರ್ಯಕ್ರಮವು ನವೆಂಬರ್ 9 ಶುಕ್ರವಾರ ಸಂಜೆ 6:30 ಗಂಟೆಗೆ ತಾಜುಲ್ ಉಲಮಾ ವೇದಿಕೆ ಜುಮಾ ಮಸ್ಜಿದ್ ಮರಿಕ್ಕಳ ಮೊಂಟೆಪದವುವಿನಲ್ಲಿ ನಡೆಯಲಿರುವುದು.

ತಾಜುಶ್ಶರೀಯ: ಶೈಖುನಾ ಅಲೀಕುಂಞಿ ಉಸ್ತಾದ್ ಶಿರಿಯ ಶೈಖುನಾ ಬೇಕಲ್ ಉಸ್ತಾದರನ್ನು ಸನ್ಮಾನಿಸಲಿದ್ದಾರೆ.
ಶರಪುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆ ವಹಿಸಲಿರುವರು.ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್ ಉದ್ಘಾಟನೆ ಮಾಡಲಿರುವರು.

ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಅಭಿನಂದನಾ ಭಾಷಣ ಮಾಡಲಿರುವರು.ಮುನೀರ್ ಅಹ್ಮದ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಲಿರುವರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರದ ಸಚಿವರಾದ ಜನಾಬ್ ಯು.ಟಿ.ಖಾದರ್,ಯು.ಕೆ.ಮೋನು ಹಾಜಿ ಕಣಚೂರು,ಎಸ್.ವೈ.ಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು,ಮರಿಕ್ಜಳ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ,ಮುಹಿಯ್ಯದ್ದೀನ್ ಸ ಅದಿ ತೋಟಾಲ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮರಿಕ್ಕಳ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com