janadhvani

Kannada Online News Paper

ಉತ್ತರ ಕರ್ನಾಟಕ ಟೀಂ ಹಸನೈನ್ ಅಮೀರ್‌ಗಳಿಗೆ :ಗೈಡ್ 2018

ಉತ್ತರ ಕರ್ನಾಟಕ ಟೀಂ ಹಸನೈನ್ ಅಮೀರ್‌ಗಳಿಗೆ ಟ್ರೈನಿಂಗ್ ತರಬೇತಿಯನ್ನು ದಾವಣಗೆರೆ ರಹ್ಮಾನಿಯ್ಯಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು.
ಮೌಲಾನಾ ಅಬೂಸುಫ್ಯಾನ್ ಮದನೀ ನೇತ್ರತ್ವ ವಹಿಸಿ ವಿಷಯ ಮಂಡಿಸಿದರು.
ಟೀಂ ಚೀಫ್ ಸಂಚಾಲಕರಾದ ಮುಸ್ತಫಾ ನ ಈಮೀ ಹಿಮಮೀ MA ಮತ್ತು ಹುಸೈನ್ ಸಅದಿ ಹೊಸ್ಮಾರು
ಟೀಂ ಹಸನೈನ್ ತರಗತಿಯ ಕ್ಲಾಸ್ ನೋಟ್ ಮೇಲೆ ಮಂಡನೆ ನಡೆಸಿದರು.
ದಾರುಲ್ ಉಲೂಂ ರಹ್ಮಾನಿಯ್ಯಾ ಮುಖ್ಯಸ್ಥ ಬಿ.ಎ.ಇಬ್ರಾಹಿಂ ಸಖಾಫಿ ದಾವಣಗೆರೆ ಉದ್ಘಾಟನೆ ಗೈದರು.


SSF ರಾಜ್ಯ ಉಪಾಧ್ಯಕ್ಷ ಆರಿಫ್ ರಝಾ ತುಮಕೂರು, ಚಿತ್ರದುರ್ಗ SSF ಅಧ್ಯಕ್ಷ ಆದಂ ಸಖಾಫಿ, ಸಮೀಉಲ್ಲಾ ದಾವಣಗೆರೆ, ಮುಂತಾದವರು ಭಾಗವಹಿಸಿದ್ದರು.
ಧಾರವಾಡ, ಗದಗ, ದಾವಣಗೆರೆ ಹಾವೇರಿ, ಚಿತ್ರದುರ್ಗದ ದಾಈಗಳು, ಟ್ರೈನರ್ಸ್ ಗಳು ಭಾಗವಹಿಸಿದ್ದರು.
ದಾವಣಗೆರೆ ಜಿಲ್ಲಾ SSF ಪ್ರ.ಕಾರ್ಯದರ್ಶಿ ಕೆ.ಕೆ. ಅಶ್ರಫ್ ಸಖಾಫಿ ಸ್ವಾಗತಿಸಿ ಧನ್ಯವಾದವಿತ್ತರು.

error: Content is protected !! Not allowed copy content from janadhvani.com