janadhvani

Kannada Online News Paper

ಯೌವನ ಮರೆಯಾಗುವ ಮುನ್ನ ; ಎಸ್ಸೆಸ್ಸೆಫ್ ಮೆಂಬರ್ ಶಿಪ್ ಡೇ ಆಚರಣೆ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ಸದಸ್ಯತನ ಅಭಿಯಾನಕ್ಕೆ ಸುಳ್ಯ ಸುನ್ನಿ ಸೆಂಟರ್’ನಲ್ಲಿ ನವಂಬರ್ 2ರಂದು ಚಾಲನೆ ನೀಡಲಾಯಿತು. ಸಯ್ಯಿದ್ ಯು.ಎಸ್ ಕುಂಞಿಕೋಯ ತಂಙಳ್ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ಲ ಸಖಾಫಿ ಪಾರೆ ಅಧ್ಯಕ್ಷತೆ ವಹಿಸಿದರು.

ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ ಪ್ರಾಸ್ತಾವಿಕ ಭಾಷಣ ನಡೆಸಿದರು. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ದುಆ ನೆರವೇರಿಸಿದರು. ಸುಳ್ಯ ಕೇಂದ್ರ ಜುಮಾ ಮಸೀದಿ ಪ್ರ. ಕಾರ್ಯದರ್ಶಿಗಳಾದ ಹಾಜಿ ಐ. ಇಸ್ಮಾಯೀಲ್, ಜಮಾಅತ್ ಕಮಿಟಿ ಸದಸ್ಯರಾದ ಹಾಜಿ ಅಬ್ದುಲ್ ಖಾದರ್ ಪಾರೆ ಆಶಂಸಾ ಭಾಷಣ ಮಾಡಿದರು.

ಎಸ್.ವೈ.ಎಸ್ ಸುಳ್ಯ ಸೆಂಟರ್ ಕಾರ್ಯದರ್ಶಿ ರಫೀಕ್ ಚಾಯ್ಸ್, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ, ಅಝೀಝ್ ಕರ್ನಾಟಕ, ನೌಶಾದ್ ಕೆರೆಮೂಲೆ, ಸಿದ್ದೀಕ್ ನಾವೂರು, ಜಮಾಲ್ ಗುರುಂಪು, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ನಾಯಕರಾದ ಮಾಲಿಕ್ ಕೊಯಂಗಿ, ಸ್ವಾದಿಖ್ ಪಿ.ಜಿ ಉಪಸ್ಥಿತರಿದ್ದರು.
ಸ್ವಬಾಹ್ ಹಮೀದ್ ಬೀಜಕೊಚ್ಚಿ ಸ್ವಾಗತಿಸಿ, ಶಾಖಾಧ್ಯಕ್ಷರಾದ ಆರಿಫ್ ಬುಶ್ರಾ ವಂದಿಸಿದರು. ಪ್ರ. ಕಾರ್ಯದರ್ಶಿ ಆಬಿದ್ ಕಲ್ಲುಮುಟ್ಲು ನಿರೂಪಿಸಿದರು.

error: Content is protected !! Not allowed copy content from janadhvani.com