ಕೊಣಾಜೆ : ಎಸ್ ಎಸ್ ಎಫ್ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಫರೀದ್ ನಗರ ಶಾಖೆಯ ಯವ್ವನ ಮರೆಯಾಗುವ ಮುನ್ನ ಯುನಿಟ್ ಕಾನ್ಫೆರೆನ್ಸ್ ಶಾಖಾ ಕಛೇರಿಯಲ್ಲಿ ಫೈಝಲ್ ಫರೀದ್ ನಗರ ಅಧ್ಯಕ್ಷತೆಯಲ್ಲಿ ಜರುಗಿತು.
ಸಯ್ಯಿದ್ ಶರಫುದ್ದೀನ್ ಅಲ್ ಹೈದ್ರೋಸಿ ಎಮ್ಮೆಮಾಡ್ ತಂಙಳ್ ರವರ ನೇತೃತ್ವದಲ್ಲಿ ಅಲ್ತಾಫ್ ಮದನಿ ಉಸ್ತಾದರು ಮುಖ್ಯ ಪ್ರಭಾಷಣಗೈದರು.ನೌಫಲ್ ಮಲಾರ್ ಅಲ್ ಮದೀನ ವಿದ್ಯಾರ್ಥಿ ಉಧ್ಘಾಟನೆ ನೆರೆವೇರಿಸಿದರು ವೇದಿಕೆಯಲ್ಲಿ ರಫೀಖ್ ಮಲಾರ್,ಸೆಕ್ಟರ್ ನಾಯಕರಾದ ಜಲೀಲ್, ನೌಫಲ್ ಫರೀದ್ ನಗರ, ಮುನೀರ್ ಬೈತಾರ್, ಬದ್ರುದ್ದೀನ್ ಅಧ್ಯಕ್ಷರು ಫರೀದ್ ನಗರ ಜುಮಾ ಮಸ್ಜಿದ್ ಹಾಗೂ ಎಸ್ ವೈ ಎಸ್ ಸೆಂಟರ್ ನಾಯಕರುಗಳಾದ ಮಜೀದ್ ಮತ್ತಿತರು ಉಪಸ್ಥಿತರಿದ್ದರು.
ಶಾಖಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ಫಾಕ್ ಸ್ವಾಗತಿಸಿ ನಿರೂಪಿಸಿದರು.