ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ರಾಜ್ಯದ ಎಲ್ಲಾ ಝೋನ್ ಗಳ ಮುಲಾಖಾತ್ ನಡೆಯುತ್ತಿದ್ದು ಅದರಂತೆ ಮಂಗಳೂರು ಝೋನ್ ಉಲಮಾ ಮುಲಾಖಾತ್ ಅಕ್ಟೋಬರ್ 24ರಂದು ಬೋಂದೆಲ್ ಅಲ್ ರಶಾದ್ ಎಜುಕೇಷನ್ ಸೆಂಟರ್ ನಲ್ಲಿ ಝೋನ್ ಅಧ್ಯಕ್ಷರಾದ ಉಸ್ತಾದ್ ಬಶೀರ್ ಮದನಿ ಅಲ್ ಕಾಮಿಲ್ ರವರ ಅಧ್ಯಕ್ಷತೆಯಲ್ಲಿ ಯಿತು.
ಅಲ್ ರಶಾದ್ ಶಿಕ್ಷಣ ಸಂಸ್ಥೆಯ ಅಬ್ದುಲ್ ರಹಿಮಾನ್ ಸಖಾಫಿ ಬಾಕ್ರಬೈಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಅಲ್ ಹಾಜ್ ಹಂಝ ಸಖಾಫಿ ಬಂಟ್ವಾಳ ಉಲಮಾ ಗಳ ಜವಾಬ್ದಾರಿ ಮತ್ತು ನಾಯಕತ್ವ ಗುಣ ಎಂಬುದರ ಬಗ್ಗೆ ವಿಷಯ ಮಂಡಿಸಿದರು. ಹಿರಿಯ ವಿದ್ವಾಂಸ ಶರೀಫ್ ಮುಸ್ಲಿಯಾರ್ ಕೂಳೂರು, ಜೆಪ್ಪು ರೇಂಜ್ ಅಧ್ಯಕ್ಷ ಸತ್ತಾರ್ ಸಖಾಫಿ ಅಡ್ಯಾರ್ ಪದವು ಮಂಗಳೂರು ರೇಂಜ್ ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ, ಇಸಾಕ್ ಸಖಾಫಿ ಮರಕಡ,ಆರಿಫ್ ಮದನಿ ಬೀರ್ಪುಗುಡ್ಡೆ, ಹಮೀದ್ ಸಖಾಫಿ ಬೋಂದೆಲ್ ಮುಂತಾದವರು ಉಪಸ್ಥಿತರಿದ್ದರು. ಮಂಗಳೂರು ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಸ್ವಾಗತಿಸಿ ವಂದಿಸಿದರು.