janadhvani

Kannada Online News Paper

ಅ.25ಕ್ಕೆ ಇರಾ ಪರಪ್ಪು ಸೈಟ್ ನಲ್ಲಿ ಮಹ್ಲರತುಲ್ ಬದ್ರಿಯಾ ಹಾಗು ಯೂನಿಟ್ ಸಮ್ಮೇಳನ

ಮುಡಿಪು : ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ವ್ಯಾಪ್ತಿಯ ಇರಾ ಸೈಟ್ ಶಾಖೆಯ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ “ಎಂಬ ಘೋಷ ವಾಕ್ಯದೊಂದಿಗೆ ಯೂನಿಟ್ ಸಮ್ಮೇಳನ ಮತ್ತು ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ಎಸ್ಸೆಸ್ಸೆಫ್ ಇರಾ ಸೈಟ್ ಅಧ್ಯಕ್ಷ ಹೈದರ್ ಅಲಿ ರವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 25 ಗುರುವಾರ ಸಂಜೆ 6:30 ಗಂಟೆಗೆ ತಾಜುಲ್ ಉಲಮಾ ನಗರ ಮರ್ಹೂಂ ಮುಹ್ಸಿನ್ ವೇದಿಕೆ ಇರಾ ಸೈಟ್ ನಲ್ಲಿ ನಡೆಯಲಿರುವುದು.

ಇರಾ ಸೈಟ್ ಜುಮ್ಮಾ ಮಸ್ಜಿದ್ ಖತೀಬ್ ಅಬ್ದುಲ್ ಲತೀಫ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೊಸ್ ತಂಙಲ್ ಕಿಲ್ಲೂರು ಮಹ್ಲರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿರುವರು.

ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಮುಖ್ಯ ಪ್ರಬಾಷಣಗೈಯಲಿರುವರು.

ಸಯ್ಯಿದ್ ಇದ್ರೀಸು ಶಾಫಿ ತಂಙಲ್ ಅಲ್ ಹೈದ್ರೊಸ್ ತಲಶ್ಶೇರಿ ,ಸಯ್ಯಿದ್ ತ್ವಾಹ ತಂಙಲ್ ಅಲ್ ಹೈದ್ರೊಸ್ ಪೂಕೂಟುರು ,ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟಪದವು ,ಜಿಲ್ಲಾ ಸದಸ್ಯ ಜಮಾಲುದ್ದೀನ್‌ ಸಖಾಫಿ ಮುದುಂಗಾರುಕಟ್ಟೆ,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ,ಅಬೂಬಕ್ಕರ್ ಸಿದ್ದೀಕ್ ಸಖಾಫಿ ಕಾಯಾರ್ ,ಅಬ್ದುಲ್ ಲತೀಫ್ ಸಖಾಫಿ ಕುಡ್ತಮುಗೇರ್‌ ,ಅಬ್ದುಲ್ ಅಝೀಝ್ ಎಚ್.ಕಲ್ ,ಅಬ್ದುಲ್ ರಝ್ಝಾಕ್‌ ಕುಕ್ಕಾಜೆ ,ಉಮ್ಮರ್ ಸಖಾಫಿ ಪಾನೆಲ. ಮುಹಮ್ಮದ್ ಹಾಜಿ ಶಾಂತಿಬಾಗ್ ,ಉಮ್ಮರ್ ಸಂಗಂ ,ಅಬ್ದುಲ್ ರವೂಫ್ ಇರಾ ಸೈಟ್, ಬಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಇರಾ ಸೈಟ್ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com