janadhvani

Kannada Online News Paper

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ನಿಂದ ಉತ್ತರ ಕರ್ನಾಟಕ ರಿಹ್ಲಾ ಯಾತ್ರೆ

‎ಬೆಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಭರವಸೆಯ ನಾಯಕರನ್ನು ಸೃಷ್ಟಿಸುವ ಉದ್ದೇಶದಲ್ಲಿ ರಚಿಸಿರುವ ಟೀಮ್ ಹಸನೈನ್ ನ ಕಾರ್ಯಕರ್ತರಿಗೆ ಉತ್ತರ ಕರ್ನಾಟಕ ಪ್ರಭೋದನೆಗಾಗಿ ರಿಹ್ಲಾ ದ ಅವಾ ಟೂರನ್ನು ಹಮ್ಮಿಕೊಂಡಿದೆ.ಮುಂದಿನ ದಿನಗಳಲ್ಲಿ ರಾಜ್ಯದ 10 ಜಿಲ್ಲೆಗಳ ಡಿವಿಷನ್ ಗಳ ತಂಡವು ಉತ್ತರ ಕರ್ನಾಟಕ ಪ್ರಮುಖ ಜಿಲ್ಲೆಗಳ ಹಳ್ಳಿಗಳಿಗೆ ದ ಅವಾ ಕಾರ್ಯಾಚರಣಗೆ ತೆರಳಲಿದ್ದು,ಅದರ ದ್ವಿತೀಯ ತಂಡವು ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ಕಾರ್ಯಕರ್ತರಿಂದ ರಿಹ್ಲಾ ಯಾತ್ರೆಯು ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಯ ಬೂದುಗುಂಪ,ಯರಡೋನ,ಬೆನ್ನೂರು,ಬಟ್ಟರ ನರ್ಸಾಪುರ,ಸಿದ್ದಾಪುರ,ಕಂಪ್ಲಿ,ರಾಮ ನಗರ,ಕಕ್ಕರಗೋಳ,ಹರಪನಹಳ್ಳಿ,ಟುಕ್ಕೇ ಮೊಹಲ್ಲ,ಬಾನಗೆರೆ,ಹರ್ಲಾಪುರ,ಚಿಂಚಲಿ,ಬಡ್ನಿ,ಕಳಸ,ಇಂಗಳಹಳ್ಳಿ,ಬೆಳಗಲಿ,ಕಾರಟಗಿ,ಬಸಾಪಟ್ಟಣ ಹಳ್ಳಿಗಳಲ್ಲಿ ರಿಹ್ಲಾ ದ ಅವಾ ಟೂರ್ ಅಕ್ಟೋಬರ್ 20,21,22 ದಿನಾಂಕಗಳಲ್ಲಿ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ರವರ ಮಾರ್ಗದರ್ಶನದಲ್ಲಿ ಎಸ್ಸೆಸ್ಸೆಫ್ ಉಳ್ಳಾಲಡಿವಿಷನ್ ಟೀಮ್ ಹಸನೈನ್ ಗೈಡ್ ತೌಸೀಫ್ ಸ ಅದಿ ಹರೇಕಳ ರವರ ನೇತೃತ್ವದಲ್ಲಿ ನಡೆಯಲಿರವುದು ಎಂದು ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com