ಸುಳ್ಯ:ದಿನಾಂಕ 16-10-2018 ರಂದು ಮಂಡೆಕೊಲು ಅಲಿಹಾಜಿ ಯವರ ಸ್ವ ಗೃಹದಲ್ಲಿ ಎಸ್ ವೈ ಎಸ್ ಬ್ರಾಂಚ್ ಮಾಜಿ ಅಧ್ಯಕ್ಷರಾದ ಅಬ್ದುಲ್ಲ ಸಖಾಫಿಯವರ ಅಧ್ಯಕ್ಷತೆಯಲ್ಲಿ ಗುರುವಮೊಟ್ಟೆ ಮಂಡೆಕೇೂಲು ಯುನಿಟ್ ಕಾನ್ಫ್ರೆನ್ಸ್ ನಡೆಯಿತು. ಎಸ್ ವೈ ಎಸ್. ಪ್ರ ಕಾರ್ಯದರ್ಶಿ ಜಿ.ಕೆ ಮುಹಮ್ಮದ್ ಮುಸ್ಲಿಯಾರ್ ಉದ್ಛಾಟಿಸಿದರು. ಜಾಲ್ಸೂರು ಸೆಕ್ಟರ್ ಕೊಶಾದಿಕಾರಿ ಲತೀಫ್
ಸ-ಅದಿಯವರ ನೇತೃತವದಲ್ಲಿ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ನಡೆಯಿತು. ಕರ್ನಾಟಕ ರಾಜ್ಯ ಸದಸ್ಯರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಶುಭಹಾರೈಸಿದರು.
ಕಬೀರ್ ಹಿಮಮಿ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು. ಹುಸೈನ್ ತಂಙಳ್ ಆದೂರು, ನಾಸಿರ್ ಸುಖೈಫಿ,
ಎಬಿ ಸ- ಅದಿ, ಅಂದುಞ ಗೇೂರಡ್ಕ, ಸಮೀರ್ ಮೊಗರ್ಪಣೆ, ಸಿದ್ದೀಕ್ ಕಟ್ಟೆಕ್ಕಾರ್ಸ್ ಹಾಗೂ ಇನ್ನಿತರ ಹಲಾವಾರು ಗಣ್ಯರು ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಇಬ್ರಾಹಿಂ ಅಮ್ಜದಿ ನಿರೂಪಿಸಿದರು. ಯುನಿಟ್ ಅಧ್ಯಕ್ಷ ಅಶ್ರಫ್ ಜೌಹರಿ ಸ್ವಾಗತಿಸಿ ಕಾರ್ಯದರ್ಶಿ ರಿಫಾಯಿ ವಂದಿಸಿದರು.