janadhvani

Kannada Online News Paper

ಸೆರ್ಕಳ ನಗರದಲ್ಲಿ ಯುನಿಟ್ ಸಮ್ಮೇಳನ ಯೌವ್ವನ ಮರೆಯಾಗುವ ಮುನ್ನ…

 

ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ರಾಜ್ಯ ಸಮಿತಿ ಹಮ್ಮಿಕೊಂಡ ಯುನಿಟ್ ಸಮ್ಮೇಳನ ಇತ್ತೀಚೆಗೆ ಸೆರ್ಕಳ ನಗರ ರಹ್ಮಾನಿಯ ಮದ್ರಸದಲ್ಲಿ ನಡೆಯಿತು.
ಸ್ಥಳೀಯ ಇಮಾಮರಾದ ಅಕ್ಬರ್ ಅಲಿ ಮದನಿ ಆಲಂಪಾಡಿ ಸಭೆಯನ್ನು ಉದ್ಘಾಟಿಸಿದರು.
ನಂತರ ಯೌವ್ವನ ಮರೆಯಾಗುವ ಮುನ್ನ ಎಂಬ ವಿಷಯದಲ್ಲಿ ಬಹು ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಭಾಷಣ ಮಾಡಿದರು.
ಸಭೆಯಲ್ಲಿ SSF ದ.ಕ ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹೀಂ ಸಖಾಫಿ ಸೆರ್ಕಳ,ಹಯಾತುಲ್ ಇಸ್ಲಾಂ ಮದ್ರಸ ಸೆರ್ಕಳ ಮುಅಲ್ಲಿಂ ಮುಹಿಯದ್ದೀನ್ ಮದನಿ ಕಕ್ಕಿಂಜೆ, ಬದ್ರಿಯಾ ಜುಮಾ ಮಸೀದಿ ಸೆರ್ಕಳ ಅಧ್ಯಕ್ಷರಾದ CH ಅಬೂಬಕ್ಕರ್ ಸೆರ್ಕಳ,SYS ಮಂಚಿ ಸೆಂಟರ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಸೆರ್ಕಳ, ರಹ್ಮಾನಿಯ ಮದ್ರಸ ಕಮಿಟಿ ಉಪಾಧ್ಯಕ್ಷರಾದ ಅಶ್ರಫ್ ಮದನಿ ಚೌಕ,SSF ಸೆರ್ಕಳ ನಗರ ಶಾಖೆ ಅಧ್ಯಕ್ಷರಾದ BS ಮುಹಮ್ಮದ್ ಹನೀಫ್ ಸೆರ್ಕಳ ನಗರ,
SSF ಬಂಟ್ವಾಳ ಡಿವಿಶನ್ ಸದಸ್ಯರುಗಳಾದ ಮುಹಮ್ಮದ್ ಅಲಿ ಮದನಿ ಸೆರ್ಕಳ,ಹುಸೈನಾರ್ ಸೆರ್ಕಳ,SSF ಕಲ್ಲಡ್ಕ ಸೆಕ್ಟರ್ ಪ್ರ.ಕಾರ್ಯದರ್ಶಿ ಅಬ್ದುಲ್ ಮಜೀದ್ ಕದ್ಕಾರ್,ಇಲ್ಯಾಸ್ ಮದನಿ ಸೆರ್ಕಳ ನಗರ,ಮುಂತಾದವರು ಉಪಸ್ಥಿತರಿದ್ದರು.

ವರದಿ:
🅰🅰Ⓜ ಆಲಂಪಾಡಿ

error: Content is protected !! Not allowed copy content from janadhvani.com