janadhvani

Kannada Online News Paper

ಎಸ್ಸೆಸ್ಸೆಫ್ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಎಲೆಕ್ಷನ್ ವರ್ಕ್ ಶಾಪ್ -18

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಇದರ 2018ನೇ ಸಾಲಿನ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳ ಅಧಿಕಾರಿಗಳು, ಮತ್ತು ನಾಯಕರಿಗೆ ಎಲೆಕ್ಷನ್ ವರ್ಕ್ ಶಾಪ್-18 ಕಾರ್ಯಕ್ರಮವನ್ನು
ಹೈದರಾಬಾದ್ ಕರ್ನಾಟಕದ ಗಂಗಾವತಿ ಯಲ್ಲಿ ನಡೆಯಿತು. ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವಿವಿಧ ಘಟಕಗಳ ನಾಯಕರು ಭಾಗವಹಿಸಿದ್ದರು.

ಎಸ್ಸೆಸ್ಸೆಫ್ ರಾಜ್ಯ ನಾಯಕ ಹಮೀದ್ ಉಸ್ತಾದ್ ಶಿವಮೊಗ್ಗ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರಾಜ್ಯ ಚುನಾವಣಾ ಮಂಡಳಿ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ವರ್ಕ್ ಶಾಪ್ ನಡೆಸಿ ಕೊಟ್ಟರು.
ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಸಂಘಟನಾ ತರಬೇತಿ ನೀಡಿದರು

ರಾಜ್ಯ ಟೆಕ್ನಿಕಲ್ ಆಫಿಸರ್ ರವೂಫ್ ಕುಂದಾಪುರ ತಾಂತ್ರಿಕ ಮಾಹಿತಿ ನೀಡಿದರು.

ಮುಸ್ತಫ ನಯೀಮಿ ಹಾವೇರಿ ಟೀಂ ಹಸನೈನಿ ಬಗ್ಗೆ ವಿವರಿಸಿದರು. ಎಸ್ ವೈ ಎಸ್ ಕೊಪ್ಪಳ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಸಾಹೇಬ್, ಎಸ್ ಎಸ್ ಎಫ್ ರಾಜ್ಯ ನಾಯಕ ಮೌಲಾನಾ ಗುಲಾಂ ಹುಸೈನ್ ಬೂದುಗುಂಪ, ಮಹಬೂಬ್ ಸಾಬ್ ಬಸಾಪಟ್ಟಣ, ಹಾಜಿ ನವಾಝ್ ಅಹ್ಮದ್ ಬಳ್ಳಾರಿ, ಮೌಲಾನಾ ಹಾಫಿಳ್ ಸಲೀಂ, ಮೌಲಾನಾ ಖಾಜಾ ಬರಕಾತಿ,ಮುಹಮ್ಮದ್ ಯೂನುಸ್ ಬಾಗಲಕೋಟೆ, ಮತ್ತಿತರರು ಉಪಸ್ಥಿತರಿದ್ದರು.
ಎಸ್ ಎಸ್ ಎಫ್ ಕೊಪ್ಪಳ ಜಿಲ್ಲಾಧ್ಯಕ್ಷ ನೂರುದ್ದೀನ್ ರಝ್ವಿ ಸ್ವಾಗತಿಸಿ ಹಾಫಿಳ್ ಸಾಹೇಬ್ ವಂದಿಸಿದರು.

error: Content is protected !! Not allowed copy content from janadhvani.com