ಬೆಂಗಳೂರು : ಪ್ರಮುಖ ಇಸ್ಲಾಮಿಕ್ ವಿದ್ವಾಂಸರು, ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳೂ ಆದ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ನಾಳೆ (17.9.2018) ಬೆಂಗಳೂರು ಭೇಟಿ ನೀಡಲಿದ್ದು, ಬೆಂಗಳೂರಿನ ಪ್ರಮುಖ ಉದ್ಯಮಿಯೂ,ಅಖಿಲ ಭಾರತ ಇಸ್ಲಾಮಿಕ್ ಶೈಕ್ಷಣಿಕ ಮಂಡಳಿಯ ಕೋಶಾಧಿಕಾರಿಯೂ, ಜುಮಾ ಮಸ್ಜಿದ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಮರ್ಹೂಂ ಅನ್ವರ್ ಶರೀಫ್ ಸಾಹೇಬ್ ರ ಅನುಸ್ಮರಣಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅನುಸ್ಮರಣಾ ಸಭೆಯು ಸೋಮವಾರ ರಾತ್ರಿ 8.30ಕ್ಕೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ (ಹಜ್ ಕ್ಯಾಂಪ್) ದ ಖಾದಿರಿಯ್ಯಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಜ್ ಸಮಿತಿ ಕಚೇರಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಇಸ್ಲಾಮಿಕ್ ಬೋರ್ಡ್ ಆಫ್ ಇಂಡಿಯಾ ( IEBI) ದ ಕರ್ನಾಟಕ ಪ್ರಾಂತ್ಯದ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಇಹ್ಸಾನ್ ಕರ್ನಾಟಕ ಚೆಯರ್ಮ್ಯಾನ್ ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.