ಪುತ್ತೂರು:ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯಿಂದ ಖಿಯಾದ-2018 ಟೀಮ್ ಹಸನೈನ್ ಕಾರ್ಯಕರ್ತರ ಟ್ರೈನಿಂಗ್ ಕ್ಯಾಂಪ್ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ರವರ ಅಧ್ಯಕ್ಷತೆಯಲ್ಲಿ ಕೆ.ಜಿ.ಎನ್ ಮಿತ್ತೂರಿನಲ್ಲಿ ನಡೆಯಿತು.ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮರ್ಕಝ್ ನ ನುರಿತ ತರಬೇತುದಾರ ಡಾ: ಮುಹ್ಸಿನ್ ಸರ್ ಕ್ಯಾಲಿಕೆಟ್ ರವರು ತರಭೇತಿಯನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಶರೀಫ್ ಸರ್ ಬೆಂಗಳೂರು ಹಾಗೂ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ಟೀಮ್ ಹಸನೈನ್ ಟ್ರೈನರ್ಸ್ ಗಳಿಗೆ ಟೀಮ್ ಹಸನೈನ್ ಮಾಹಿತಿಯೊಂದಿಗೆ ಕ್ಲಾಸ್ ನೋಟ್ ಗಳನ್ನು ನೀಡಿ,ವಿವರಿಸಿದರು.ಟೀಮ್ ಹಸನೈನ್ ನಿಗೆ ಡಿವಿಷನ್ ನಿಂದ ಆಯ್ಕೆಯಾದ ಡಿವಿಷನ್ ಗೈಡ್,ಸೆಕ್ಟರ್ ಅಮೀರ್ ಹಾಗೂ ಟ್ರೈನರ್ಸ್ ಗಳು ಈ ಕ್ಯಾಂಪ್ ನ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ದಾರುಲ್ ಇರ್ಶಾದ್ ಸಂಸ್ಥೆಯ ಮೇನೇಜರ್ ಶರೀಫ್ ಸಖಾಫಿ ಮಿತ್ತೂರು, ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಮೌಲಾನಾ ಅಶ್ರಫ್ ಅಂಜದಿ ಉಡುಪಿ,ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ,ಕೊನೆಗೆ ವಂದಿಸಿದರು.