janadhvani

Kannada Online News Paper

ಮಾಧ್ಯಮಗಳಿಂದಾಗಿ ರಾಜ್ಯ ಹಾಳಾಗುತ್ತಿದೆ- ಮುಖ್ಯಮಂತ್ರಿ

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕಿಡಿಗೆ ಮಾಧ್ಯಮಗಳೇ ಕಾರಣ. ಬೆಂಕಿ ಹಚ್ಚುತ್ತಿರುವವರು ನೀವು ರಾಜ್ಯ ಹಾಳಾಗುತ್ತಿರುವುದು ನಿಮ್ಮಿಂದಲೇ ಎಂದು ಮಾಧ್ಯಮಗಳ ನಡೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ನಾನು ಯಾವುದೇ ತಪ್ಪು ಹೇಳಿಕೆ ಕೊಟ್ಟಿಲ್ಲ. ಶಾಸಕ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ್ದೆ. ಪ್ರತ್ಯೇಕ ರಾಜ್ಯವಾದರೇ ಅನುದಾನ ಎಲ್ಲಿ ತರುತ್ತೀರಿ ಎಂದು ಪ್ರಶ್ನಿಸಿದ್ದೆ. ಇದನ್ನ ಹೊರತು ಪಡಿಸಿ ಬೇರೇನೂ ಹೇಳಿಲ್ಲ. ಆದರೆ ಇದನ್ನೇ ಮಾಧ್ಯಮಗಳು ಒತ್ತಿ ಒತ್ತಿ ತೋರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಉದ್ದಾರ ಆಗಬೇಕೋ ಅಥವಾ ಬೇಡವೂ ನೀವೆ ನಿರ್ಧರಿಸಿ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕಿಡಿಗೆ ರಾಜಕಾರಣಿಗಳಲ್ಲ. ಮಾಧ್ಯಮಗಳೇ ಕಾರಣ ಎಂದು ಮಾಧ್ಯಮಗಳ ಮೇಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬೊಟ್ಟು ಮಾಡಿದ್ದಾರೆ. ಬಿತ್ತರಿಸಿದ ವಿಷಯವನ್ನು ಮತ್ತೆ ಮತ್ತೆ ಬಿತ್ತರಿಸುವ ಮಾಧ್ಯಮಗಳ ವಿರುದ್ದ ಸಿಎಂ ಹರಿಹಾಯ್ದಿರುವುದು ಇದೇ ಮೊದಲೇನಲ್ಲ.

error: Content is protected !! Not allowed copy content from janadhvani.com