ಬೆಳ್ತಂಗಡಿ: (ಜನಧ್ವನಿ ವಾರ್ತೆ) ಬೋವು ಕರ್ಡಳಿಕೆ ಮದ್ರಸಾ ವಠಾರದಲ್ಲಿ ದಿನಾಂಕ 24 ರಂದು ಮಗ್ರಿಬ್ ನಮಾಝ್ ಬಳಿಕ ಫತ್ ಹೇ ಮುಬಾರಕ್ ಕಾರ್ಯಕ್ರಮ ನಡೆಯಿತು. ಹೊಸ ವಿಧ್ಯಾರ್ಥಿಗಳಿಗೆ ಸ್ವಾಗತ ಕೋರುವ ಮೂಲಕ ಉಧ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಜಮಾಅತ್ ಅಧ್ಯಕ್ಷ ಹುಸೈನ್ ಹಾಜಿ ಪಾದಳಿಕೆ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಯು.ಪಿ.ಇಬ್ರಾಹಿಂ ಮದನಿ ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ H.ಯೂಸುಫ್ ಮುಂಚೇರಿ ಭಾಗವಹಿಸಿದ್ದರು. ಅಬ್ದುಲ್ ಸಮದ್ ಮದನಿ ಪಾದಳಿಕೆ ಸ್ವಾಗತಿಸಿದರು. ಜುನೈದ್ ಮುಸ್ಲಿಯಾರ್ ಮುಂಚೇರಿ ನಿರೂಪಿಸಿ ವಂದಿಸಿದರು.