janadhvani

Kannada Online News Paper

ಎಸ್ ವೈಎಸ್ ನಂದಾವರ ಘಟಕದ ಅಧ್ಯಕ್ಷರಾಗಿ ಇಸ್ಮಾ‌ಈಲ್ ಆಶ್ರಯ ಆಯ್ಕೆ

ಬಂಟ್ವಾಳ: ಕರ್ನಾಟಕ ರಾಜ್ಯ ಎಸ್‌ವೈಎಸ್ ನಂದಾವರ ಘಟಕದ ನೂತನ ಅಧ್ಯಕ್ಷರಾಗಿ ಇಸ್ಮಾಈಲ್ ಆಶ್ರಯ ಆಯ್ಕೆಯಾಗಿದ್ದಾರೆ.
ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿದ್ದ ಉಸ್ಮಾನ್ ಮಾಲಿಕ್ ರವರು ಮೇಲ್ಘಟಕ; ಪಾಣೆಮಂಗಳೂರು ಸರ್ಕಲ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದುದರಿಂದ ಈ ಸ್ಥಾನ ತೆರವಾಗಿತ್ತು.
ಶರೀಫ್ ಸ‌ಅದಿ ನಂದಾವರ ದುಆ ಮಾಡಿ, ಉಸ್ಮಾನ್ ಮಾಲಿಕ್ ಅಧ್ಯಕ್ಷತೆ ವಹಿಸಿದ್ದರು‌‌. ಎ.ಕೆ.ನಂದಾವರ ಉದ್ಘಾಟಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿದರು.
ಪ್ರ‌.ಕಾರ್ಯದರ್ಶಿ ಅಬ್ದುಲ್ ಹಮೀದ್ ದಾಸರಗುಡ್ಡೆ ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com