janadhvani

Kannada Online News Paper

ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ದುಬೈ ಸರಕಾರದ ರಮಳಾನ್ ಅತಿಥಿ

ದುಬೈ: ಪ್ರಮುಖ ಮುಸ್ಲಿಮ್ ವಿದ್ವಾಂಸ, ಭಾಷಣಗಾರ, ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ದುಬೈ ಸರಕಾರದ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಇಲಾಖೆಯ ರಂಝಾನ್ ಕಾರ್ಯಕ್ರಮವಾದ “ಶೈಕ್ ರಾಷಿದ್ ಬಿನ್ ಮುಹಮ್ಮದ್ ರಂಝಾನ್ ಗಾತರಿಂಗ್” ಕಾರ್ಯಕ್ರಮದಲ್ಲಿ ಮರ್ಕಝಿನ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ. ದುಬೈ ರಾಶಿದಿಯ್ಯಾ ಗ್ರ್ಯಾಂಡ್ ಮಸೀದಿಯಲ್ಲಿ ಮೇ 24 ರಂದು ಅವರು ಉಪನ್ಯಾಸ ನೀಡಲಿರುವರು.

ಹಿಂದಿನ ವರ್ಷಗಳಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರ ಅತಿಥಿಯಾಗಿ ಮತ್ತು ರಂಝಾನ್ ಅಂತರಾಷ್ಟ್ರೀಯ ಪವಿತ್ರ ಕುರ್ ಆನ್  ಪ್ರಶಸ್ತಿ ಸಮಿತಿಯ ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕೃತ ಪ್ರತಿನಿಧಿಯಾಗಿಯೂ ಮೌಲಾನಾ ಅಬ್ದುಲ್ ರಹ್ಮಾನ್ ಸಖಾಫಿ ಭಾಗವಹಿಸಿದ್ದಾರೆ.

ಇಸ್ಲಾಮಿಕ್ ಉಪನ್ಯಾಸ ವೇದಿಕೆಗಳಲ್ಲಿ  ತನ್ನದೇಯಾದ ಛಾಪು ಮೂಡಿಸಿದ ಅಬ್ದುಲ್ ರಹ್ಮಾನ್ ಸಖಾಫಿಯವರು ಭಾರತ ಮತ್ತು ಹೊರ ದೇಶಗಳಲ್ಲಿ ಸಾವಿರಾರು ವೇಧಿಕೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.ಅವರು ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.

error: Content is protected !! Not allowed copy content from janadhvani.com