janadhvani

Kannada Online News Paper

ಅ.23 ಕ್ಕೆ ಕಿನ್ಯದಲ್ಲಿ ಮದ್ಹುರ್ರಸೂಲ್ ಸಮಾವೇಶ, ಬೃಹತ್ ಮೀಲಾದ್ ರ‌್ಯಾಲಿ- ಸ್ವಾಗತ ಸಮಿತಿ ರಚನೆ

ಪರಮಾಂಡ ಇಸ್ಮಾಈಲ್ ಹಾಜಿ,ಬಷೀರ್ ಕೂಡಾರ,ರಹ್ಮತ್ ನಗರ ಇಬ್ರಾಹೀಂ ಹಾಜಿ ನೇತೃತ್ವದ ಸ್ವಾಗತ ಸಮಿತಿ ಅಸ್ತಿತ್ವಕ್ಕೆ.

ಕಿನ್ಯಾ: ಪುಣ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಅನುಗ್ರಹೀತ ಜನ್ಮ ತಿಂಗಳಾದ ಪವಿತ್ರ ರಬೀವುಲ್ ಅವ್ವಲ್ ಪ್ರಯುಕ್ತ ಅಕ್ಟೋಬರ್ 23 ಕ್ಕೆ ಕಿನ್ಯ ದಲ್ಲಿ SჄS ಮತ್ತು SSF ವತಿಯಿಂದ ಐತಿಹಾಸಿಕ “ಹುಬ್ಬುರ್ರಸೂಲ್ ಸಮಾವೇಶ ಹಾಗೂ ಬೃಹತ್ ಮೀಲಾದ್ ರ‌್ಯಾಲಿ” ನಡೆಯಲಿದೆ.

ಈ ಸಂಬಂಧ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ಸೇರಿದ್ದ ಸಭೆಯಲ್ಲಿ, ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಗೆ ರೂಪು ನೀಡಲಾಯಿತು.
ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ಚಯರ್ಮಾನ್, ಬಷೀರ್ ಕೂಡಾರ ಜನರಲ್ ಕನ್ವೀನರ್, ರಹ್ಮತ್ ನಗರ ಇಬ್ರಾಹೀಂ ಹಾಜಿ ಕೋಶಾಧಿಕಾರಿ ಯಾಗಿ ಆರಿಸಲಾಯಿತು.ಇರ್ಫಾನ್ ಸಖಾಫಿ ಖುತುಬಿನಗರ ವೈಸ್ ಚಯರ್ಮಾನ್ ಆಶಿಖ್ ಮೀಂಪ್ರಿ ವೈಸ್ ಕನ್ವೀನರ್ ಆಗಿ ಆಯ್ಕೆ ಮಾಡಲಾಯಿತು.

ಅಕ್ಟೋಬರ್ 23 ಆದಿತ್ಯವಾರ ಮಧ್ಯಾಹ್ನ ಎರಡು ಗಂಟೆಗೆ ಕಿನ್ಯ ಖುತುಬಿನಗರದಿಂದ ಹೊರಡುವ ಕಾಲ್ನಡಿಗೆ ಜಾಥಾ ರಹ್ಮತ್ ನಗರ, ಕುರಿಯ ಮೂಲಕ ಸಾಗಿಬಂದು ಕಿನ್ಯ ಕೇಂದ್ರ ಮಸ್ಜಿದ್ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಹಝ್ರತ್ ಹುಸೈನ್ ವಲಿಯುಲ್ಲಾಹಿ ರವರ ದರ್ಗಾ ಝಿಯಾರತ್ ನಡೆಸಿ ಮುಂದೆ ಸಾಗುವ ಜಾಥಾ ಉಕ್ಕುಡ, ಮೀಂಪ್ರಿ ಮಾರ್ಗವಾಗಿ ಬದ್ರಿಯ್ಯಾನಗರ ಮೂಲಕ ಬೆಳರಿಂಗೆ ಯಲ್ಲಿ ಸಮಾಪ್ತಿ ಗೊಳ್ಳಲಿದೆ. ಸಂಜೆ 4.30 ಕ್ಕೆ ಮದ್ಹುರ್ರಸೂಲ್ ಕಾರ್ಯಕ್ರಮ ನಡೆಯಲಿದೆ,

ಕಾರ್ಯಕ್ರಮದಲ್ಲಿ ಊರಿನ ಸುನ್ನೀ ಸಂಘ ಕುಟುಂಬದ ನಾಯಕರು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸುವರು.
ಎಸ್.ವೈ.ಎಸ್ ಕಿನ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್ ಸ್ವಾಗತಿಸಿದ ಸಭೆಯನ್ನು ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ನೌಫಲ್ ಅಹ್ಸನಿ ಉದ್ಘಾಟಿಸಿದರು, ಎಸ್.ವೈ.ಎಸ್ ಕಿನ್ಯ ಸೆಂಟರ್ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ವಂದಿಸಿದರು.

error: Content is protected !! Not allowed copy content from janadhvani.com