janadhvani

Kannada Online News Paper

ಸೆ.23: ಮಸ್ಕತ್ತಿನಲ್ಲಿ ಮುಈನುಸುನ್ನಾ UPLIFT ವೈಚಾರಿಕ ಸಮಾವೇಶ

ಮಸ್ಕತ್ : ಉತ್ತರ ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಕಾರ್ಯಾಚರಿಸುತ್ತಿರುವ ಮುಈನುಸುನ್ನಾ ಹಾವೇರಿ ವಿದ್ಯಾಸಂಸ್ಥೆಯ ಒಮಾನಿನ ಹಿತೈಷಿಗಳ ವತಿಯಿಂದ ಇಂದು(ಸೆ.23) ರಾತ್ರಿ 9ಗಂಟೆಗೆ ಅಲ್ ಖುವೈರ್ ಝವಾಬಿ ಮಸೀದಿ ಯ ಹತ್ತಿರ ಇರುವ CM ಸೆಂಟರ್ ನಲ್ಲಿ UPLIFT ವೈಚಾರಿಕ ಸಮಾವೇಶ ನಡೆಯಲಿದೆ.

ಸಾಮಾಜಿಕ ಅಭಿವೃದ್ಧಿಯ ವಿವಿಧ ಮಜಲುಗಳ ಕುರಿತು ನಡೆಯುವ ವೈಚಾರಿಕ ಸಮಾವೇಶದ ಅಧ್ಯಕ್ಷತೆಯನ್ನು ಒಮಾನಿನ ಹಿರಿಯ ಅನಿವಾಸಿ ನಾಯಕರೂ, DKSC ಇದರ ಅಧ್ಯಕ್ಷರೂ ಆದ ಮೋನಬ್ಬಾ ಹಾಜಿ ವಹಿಸಲಿದ್ದಾರೆ. KCFಅಂತರಾಷ್ಟ್ರೀಯ ಕೌನ್ಸಿಲ್ ನಾಯಕರಾದ ಸಯ್ಯಿದ್ ಆಬಿದ್ ಅಲ್ ಹೈದರೂಸ್ ತಂಙಳ್ ರವರ ಪ್ರಾರ್ಥನೆ ಯೊಂದಿಗೆ ಚಾಲನೆಗೊಳ್ಳುವ ಕಾರ್ಯಕ್ರಮವನ್ನು KCF ಒಮಾನ್ ರಾಷ್ಟ್ರೀಯ ಅಧ್ಯಕ್ಷ ರಾದ ಅಲ್ ಹಾಜ್ ಅಯ್ಯೂಬ್ ಕೋಡಿ ಉದ್ಘಾಟಿಸಲಿದ್ದಾರೆ.

SSF ರಾಜ್ಯ ಕಾರ್ಯದರ್ಶಿ, ವಿವೇಕ್ ಫೌಂಡೇಶನ್ ಮ್ಯಾನೇಜಿಂಗ್ ಡೈರೆಕ್ಟರ್, ಮುಈನುಸುನ್ನಾ ವಿದ್ಯಾಸಂಸ್ಥೆಯ ನಿರ್ವಾಹಕರಾದ ಕೆ.ಎಂ ಮುಸ್ತಫಾ ನ‌ಈಮಿ ಹಾವೇರಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

KCF INCನಾಯಕರುಗಳಾದ ಜನಾಬ್ ಇಕ್ಬಾಲ್ ಬರಕ, ಹಂಝ ಕನ್ನಂಗಾರ್, ಇಬ್ರಾಹಿಂ ಹಾಜಿ ಆತ್ರಾಡಿ, ಉಬೈದುಲ್ಲಾ ಸಖಾಫಿ ಮಿತ್ತೂರು ಹಾಗು KCFರಾಷ್ಟ್ರೀಯ ಕಾರ್ಯದರ್ಶಿಗಳಾದ ಸ್ವಾದಿಖ್ ಹಾಜಿ ಸುಳ್ಯಾ, ಕೋಶಾಧಿಕಾರಿ ಗಳಾದ ಆರಿಫ್ ಕೋಡಿ ಭಾಗವಹಿಸಲಿದ್ದಾರೆ.

error: Content is protected !! Not allowed copy content from janadhvani.com