janadhvani

Kannada Online News Paper

ಬದ್ರಿಯಾ ಜುಮಾ ಮಸ್ಜಿದ್ ಹೀರೆಬಂಡಾಡಿ: ಆಡಳಿತ ಸಮಿತಿಗೆ ನವ ಸಾರಥ್ಯ

ಪುತ್ತೂರು : ಇಲ್ಲಿನ ಹೀರೆಬಂಡಾಡಿ ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಸಮಿತಿಯ 2021-22 ನೇ ಸಾಲಿನ ಮಹಾಸಭೆಯು ದಿನಾಂಕ 15/07/2022ರಂದು ಜುಮಾ ನಮಾಝಿನ ಬಳಿಕ ಬಹು ಶರಫುದ್ದೀನ್ ತಂಙಳ್ ಸಾಲ್ಮರ ಇವರ ಗೌರವಾಧ್ಯಕ್ಷತೆಯಲ್ಲಿ ಜರಗಿತು.

2022-23 ನೇ ಸಾಲಿನ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಹಾಜಿ ಅಬೂಬಕರ್ ಬಿ ಕೆ, ಉಪಾಧ್ಯಕ್ಷರಾಗಿ ಸಲೀಂ ಮುರ, ಬಿ.ಎಚ್. ಇಲ್ಯಾಸ್ ಮದನಿ.
ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಎ.ಎಚ್.ನಾಸಿರ್ ಮಾಸ್ಟರ್, ಜೊತೆ ಕಾರ್ಯದರ್ಶಿಗಳಾಗಿ, ಮಹಮ್ಮದ್ ಬಿ, ಅಬ್ದುಲ್ ಖಾದರ್ ಬಿ.ಟಿ.
ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಹಾಜಿ ಬಿ.ಕೆ.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ
ಬಿ.ಟಿ ಮೊಹಮ್ಮದ್ ಹಾಜಿ, ಬಿ.ಕೆ ಯಾಕುಬ್ ಹಾಜಿ,
ಬಿ.ಕೆ ಅಬ್ದುಲ್ ರಹಿಮಾನ್ ಹಾಜಿ, ಹಮ್ಮಬ್ಬ ಶೌಕತ್ತು ಆಲಿ, ಇಸ್ಮಾಯಿಲ್ ಪುಳಿತ್ತಡಿ, ಸುಲೈಮಾನ್ ಅಲ್ ಸಫಾ, ಅಬ್ದುಲ್ ಹಮೀದ್ ಮುರ, ಬಿ.ಟಿ ಅಬ್ದುಲ್ ಬಶೀರ್, ಪಿ.ಮೊಹಮ್ಮದ್ ಹಾಜಿ, ಕಾಸಿಂ ಬಾಳೆಹಿತ್ತಿಲು, ಯಾಕುಬ್ ಬೆರೆಡೇಲ್, ಹಸೈನಾರ್ ಹಾಜಿ, ಸುಲೈಮಾನ್ ಪುಳಿತ್ತಡಿ ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಸಿದ್ದೀಕ್ ಹಾಜಿ ಮೇದರಬೆಟ್ಟು ರನ್ನು ಆಯ್ಕೆ ಮಾಡಲಾಯಿತು.
ಬಿ.ಟಿ ಅಬ್ಬಾಸ್ ಮದನಿಯವರು ಧನ್ಯವಾದ ಸಲ್ಲಿಸಿದರು.

✍️ಹಾಜಿ. ಎ. ಎಚ್. ನಾಸರ್

error: Content is protected !! Not allowed copy content from janadhvani.com