janadhvani

Kannada Online News Paper

ಮುಹಿಯುದ್ದೀನ್ ಜುಮಾ ಮಸ್ಜಿದ್ ಗುಂಡುಕಲ್ಲು: ಆಡಳಿತಾಧಿಕಾರಿಯಾಗಿ ಮುಹಮ್ಮದ್ ರಫಿ ನೇಮಕ

ಮೂಡಬಿದ್ರೆ: ತಾಲೂಕಿನ ಪಡುಮಾರ್ನಾಡ್ ಗ್ರಾಮದ ಕಾಯಾರ್ ಕಟ್ಟೆ ಮುಹಿಯದ್ದೀನ್ ಜುಮಾ ಮಸ್ಜಿದ್ ಗುಂಡುಕಲ್ಲು ಇಲ್ಲಿನ ಆಡಳಿತಾಧಿಕಾರಿಯಾಗಿ ಮಾಜಿ ಸೈನಿಕ, ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ ಅವರನ್ನು ನೇಮಕಗೊಳಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶ ನೀಡಿದೆ. ಆ ಹಿನ್ನೆಲೆಯಲ್ಲಿ ಅವರು ಜೂ.2 ರಂದೇ ಅಧಿಕಾರ ವಹಿಸಿಕೊಂಡಿದ್ದಾರೆ.

ಮುಹಮ್ಮದ್ ರಫಿ ಅವರು ಪ್ರಸ್ತುತ ಕಚ್ಚಿ ಮೆಮನ್ ಮಸ್ಜಿದ್ ಬಂದರ್ ಮಂಗಳೂರು ಹಾಗೂ ಝಕರಿಯಾ ಜುಮಾ ಮಸ್ಜಿದ್ ಬೆಳ್ಳಾರೆ ಸುಳ್ಯ ಇಲ್ಲಿನ ಆಡಳಿತಾಧಿಕಾರಿಯಾಗಿ ಕರ್ತವ್ಯದಲ್ಲಿದ್ದಾರೆ.ಈ ಹಿಂದೆ ಅವರು ಕಾಜೂರ್ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು. ಜಾಮಿಅ ಮಸ್ಜಿದ್ ಬೆಳ್ತಂಗಡಿ ಇಲ್ಲಿನ ಆಡಳಿತ ಸಮಿತಿ ಅಧ್ಯಕ್ಷರಾಗಿ ಸೇವೆಯಲ್ಲಿರುವ ಅವರು ಗುರುವಾಯನಕರೆ ಉರೂಸ್ ಸಮಿತಿ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಆಡಳಿತಾತ್ಮಕ ಅನುಭವ ಹೊಂದಿದವರಾಗಿದ್ದಾರೆ.

ಮುಹಮ್ಮದ್ ರಫಿ ಅವರು ಜೂ. 2 ರಂದು ಅಧಿಕಾರ ವಹಿಸುವ ಸಂದರ್ಭದಲ್ಲಿ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಖ್ ಕಾಜೂರ್, ಸಲಾಂ ಮದನಿ ಗುಂಡುಕಲ್ಲು ಹಾಗೂ ಜಮಾಅತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com