ಕಲ್ಲಡ್ಕ: ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್(SMA)
ಸುರಿಬೈಲು ರೀಜನಲ್ ವತಿಯಿಂದ ಹೈದರಲಿ ಹಂಚುಮನೆ,ಮಂಚಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಮಂಚಿಬೈಲು ಸ್ವಾಗತಿಸಿದ ಸಭೆಯನ್ನು SJM ಸುರಿಬೈಲು ರೇಂಜ್ ಅಧ್ಯಕ್ಷರಾದ ಅಬ್ದುರ್ರಝ್ಝಾಕ್ ಸಖಾಫಿ ಮಂಚಿ,ಕೊಳ್ನಾಡು ಉದ್ಘಾಟಿಸಿದರು.
SMA ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಮಾಡಾವು SMA ಕುರಿತು ವಿಷಯ ಮಂಡನೆ ಮಾಡಿದರು.ವೇದಿಕೆಯಲ್ಲಿ SMA ದ.ಕ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಸಂಪಿಲ,SMA ಬಂಟ್ವಾಳ ಝೋನ್ ಪ್ರ.ಕಾರ್ಯದರ್ಶಿ ರಫೀಖ್ ಝುಹ್ರಿ ಸುನ್ನೀ ಮಹಲ್, ಮಂಚಿ ಮಸೀದಿ ಅಧ್ಯಕ್ಷರಾದ ಬದ್ರುದ್ದೀನ್ ಹಾಜಿ ಮಂಚಿ, SJM&SMA ಬೋಳಂತೂರು ಪ್ರ.ಕಾರ್ಯದರ್ಶಿ ಅಬ್ದುರ್ರಝ್ಝಾಖ್ ಅಮ್ಜದಿ ಅಮ್ಟೂರು ಹಾಗೂ ಕೋಶಾಧಿಕಾರಿ ಅಬ್ದುರ್ರಝ್ಝಾಖ್ ಭಾರತ್ ಉಪಸ್ಥಿತರಿದ್ದರು.
ಹಾಗೂ ವಿವಿಧ ಮೊಹಲ್ಲಗಳಿಂದ ರೇಂಜ್ ಹಾಗೂ ಮ್ಯಾನೇಜ್ಮೆಂಟ್ ಪ್ರತಿನಿಧಿಗಳು ಭಾಗವಹಿಸಿದ್ದರು. ಕೊನೆಯಲ್ಲಿ SJM ಸುರಿಬೈಲು ರೇಂಜ್ ಪರೀಕ್ಷಾ ಬೋರ್ಡ್ ಚೆಯರ್ಮೆನ್ ಇಬ್ರಾಹೀಂ ಮುಸ್ಲಿಯಾರ್ ಕಯ್ಯೂರು ಇವರ ಮಗನ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು. ಎಲ್ಲಾ ಮೊಹಲ್ಲಗಳ ಐಡಿ ಕಾರ್ಡ್ ಹಾಗೂ ಎಲ್ಲಾ ಮೊಹಲ್ಲಗಳಲ್ಲಿ ನಡೆಯುವ ಸಾಮಾಜಿಕ ಪಿಡುಗು-ಜಾಗೃತಿ ಅಭಿಯಾನ ಕಾರ್ಯಕ್ರಮದ ಸರ್ಕೂಲರ್ ವಿತರಿಸಲಾಯಿತು. ಕೊನೆಯಲ್ಲಿ ಪ್ರ.ಕಾರ್ಯದರ್ಶಿ ಧನ್ಯವಾದ ಮಾಡಿದರು.