ಮಂಗಳೂರು: ಸರಳ, ಸಾತ್ವಿಕ ಉಲಮಾ ನಾಯಕ ಮರ್ಹೂಮ್ ಸಿ.ಪಿ ಮುಹಮ್ಮದ್ ಕುಂಙಿ ಉಸ್ತಾದ್ (ಮಂಜನಾಡಿ ಉಸ್ತಾದ್)ಅವರ ಅನುಸ್ಮರಣಾ ಕಾರ್ಯಕ್ರಮ ಮಂಜನಾಡಿ ಜುಮಾ ಮಸೀದಿಯಲ್ಲಿ
ಅಬ್ದುಲ್ ಕರೀಮ್ ಫೈಝಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಮುಸ್ಲಿಯಾರ್ ಸಜಿಪ ದುಃಅ ನಡೆಸಿದರು, ಮಂಜನಾಡಿ ಮುದರ್ರಿಸ್ ಪಿ.ಎ. ಆಹ್ಮದ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುವ ವಾಗ್ಮಿ ರಫೀಖ್ ಸಅದಿ ದೇಲಂಪಾಡಿ ಮುಖ್ಯ ಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ
“ಗಲ್ಫ್ ಕೂಟಾಯಿಮ” ವಾಟ್ಸ್ಆ್ಯಪ್ ಗ್ರೂಪಿನಿಂದ 150 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ SYS ಅಧ್ಯಕ್ಷ ಅಬ್ದುರ್ರಝಾಕ್ ಮದನಿ, ಅಬ್ದುಲ್ ಅಝೀಝ್ , ಎನ್ ಎಸ್ ಕರೀಮ್ ಹಾಜಿ , ಮುಹಮ್ಮದ್ ಹಾಜಿ ಖಂಡಿಕ, ಕೆಎಮ್ಕೆ ಮಂಜನಾಡಿ, ಮೊದಲಾದವರು ಉಪಸ್ಥಿತಿಯಿದ್ದರು.
ಅಬ್ದುಲ್ ಅಝೀಝ್ ಪರ್ತಿಪ್ಪಾಡಿ, ಅಲಿಕುಂಙಿ ಹಾಜಿ ಪಾರೆ ಸಂದೇಶ ಭಾಷಣ ಮಾಡಿದರು .
ಕಾರ್ಯಕ್ರಮವನ್ನು ಇಬ್ರಾಹಿಮ್ ಅಹ್ಸನಿ ಸ್ವಾಗತಿಸಿ, ವಂದಿಸಿದರು.