ಕಲ್ಲೇರಿ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯದ ಸುತ್ತೋಲೆಯಂತೆ ಕುಪ್ಪೆಟ್ಟಿ ಹಾಗೂ ಮೂರುಗೋಳಿ ಸೆಕ್ಟರ್ ವತಿಯಿಂದ ಅನಿಯಂತ್ರಿತ ತೈಲ ಬೆಲೆ ಹಾಗೂ ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಯ ವಿರುದ್ಧ ಕಲ್ಲೇರಿ ಪೆಟ್ರೋಲ್ ಬಂಕ್ ಮುಂಬಾಗ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು.
ಮುಖ್ಯ ಪ್ರಭಾಷಣ ಮಾಡಿದ ಕುಪ್ಪೆಟ್ಟಿ ಸೆಕ್ಟರ್ ಅಧಕ್ಷ ಅಥಾವುಲ್ಲಾ ಹಿಮಮಿ ಸಖಾಫಿ ಸಂಕಷ್ಟದಲ್ಲಿ ಹೊರಳುತ್ತಿರುವ ಪ್ರಜೆಗಳ ಪರ ನಿಲ್ಲಬೇಕಾದ ಸರ್ಕಾರ ಧ್ವನಿ ಕೇಳಿಸದಂತೆ ವರ್ತಿಸುತ್ತಿದೆ. ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಗೂ ಪೆಟ್ರೋಲ್ ಬೆಲೆಯೇ ಮುಖ್ಯ ಕಾರಣವೆಂದು ಆರೋಪಿಸಿದರು.
ಕಾರ್ಯಕ್ರಮವನ್ನು ಅಬ್ದುಲ್ ರಶೀದ್ ಸಅದಿ ಪದ್ಮುಂಜ ಉದ್ಘಾಟಿಸಿದರು ಮೂರುಗೋಳಿ ಸೆಕ್ಟರ್ ಅಧ್ಯಕ್ಷ ಫಿರೋಜ್ ಮುಈನಿ ಸ್ವಾಗತ ಮಾಡಿದರು.ಎಸ್ ಎಸ್ ಎಫ್ ಜಿಲ್ಲಾ ಡಿವಿಷನ್ ಮಟ್ಟದ ನಾಯಕರುಗಳಾದ ಮುಸ್ತಫಾ ಯು.ಪಿ, ಇಬ್ರಾಹಿಂ ಸಅದಿ ಕಳಂಜಿಬೈಲು, ಇಸ್ಹಾಕ್ ಮದನಿ ಅಳಕೆ ಹಾಗೂ ದ.ಕ ಜಿಲ್ಲಾ ವಕ್ಫ್ ಸೇವಕ ಸುಲೈಮಾನ್ ಉಪಸ್ಥಿತರಿದ್ದು ಆಶಿಕ್ ಉಜಿರೆಬೆಟ್ಟು ವಂಧಿಸಿದರು.