janadhvani

Kannada Online News Paper

ಹೆಚ್ಚುತ್ತಿರುವ ಕೊರೋನ, ದಕ‌ ಜಿಲ್ಲೆಯಲ್ಲಿ ಬಿಗಿಗೊಳಿಸಿದ ಮುಂಜಾಗ್ರತಾ ಕ್ರಮ

ಕೊರೋನ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ (ಮೇ 07) ರಿಂದ ಮುಂಜಾಗ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವುದಾಗಿ ಜಿಲ್ಲಾಡಾಳಿತ ಕಛೇರಿಯಲ್ಲಿ ಉಸ್ತುವಾರಿ ಸಚಿವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತಿಳಿಸಲಾಗಿದೆ.

ಅತ್ಯಾವಶ್ಯಕ ವಸ್ತುಗಳ ಖರೀದಿಗೆ ಬೆಳಿಗ್ಗೆ 06 ರಿಂದ 09ರ ವರೆಗೆ ಮಾತ್ರ ಅವಕಾಶ. 10ಗಂಟೆಯ ಒಳಗಾಗಿ ಎಲ್ಲರೂ ಮನೆಗೆ ಹಿಂತಿರುಗಿರಬೇಕು. ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವುದು ಕಂಡು ಬಂದರೆ ಅಂತಹ ವಾಹನಗಳನ್ನು ಅಧಿಕಾರಿಗಳು ಸೀಝ್ ಮಾಡಲಾಗುವುದು.

ಮುಂದಿನ ಆದೇಶ ಬರುವವರೆಗೆ ಮದುವೆ, ಗೃಹ ಪ್ರವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.

ಕೊರೋನ ಹರಡುವಿಕೆಯನ್ನು ತಡೆಯಲು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಜಿಲ್ಲಾಡಳಿತದಿಂದ ಮನವಿ ಮಾಡಲಾಗಿದೆ.

error: Content is protected !! Not allowed copy content from janadhvani.com