ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಮಾರ್ಚ್ 13 ಹಾಗೂ 14 ರಂದು ತಾಜುಸ್ಸುನ್ನ ಭಟ್ಕಳದಲ್ಲಿ ನಡೆಯುವ ಅಸಂಬ್ಲೇಜ್ ಕಾರ್ಯಾಗಾರದ ಸಿದ್ದತೆಗಾಗಿ ಅಸಂಬ್ಲೇಜ್ ಪೂರ್ವಭಾವಿ ಇನ್ಸೆಪ್ಶನ್ ಕಾರ್ಯಗಾರಗಳು ಮಾರ್ಚ್ 6,7,8,9,10 ದಿನಾಂಕಗಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗರವರ ಆದ್ಯಕ್ಷತೆಯಲ್ಲಿ ಆನ್ಲೈನ್ ನಲ್ಲಿ ನಡೆಯಲಿರುವುದು.
ಮಾರ್ಚ್ 6 ರಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ,ಮಾರ್ಚ್ 7 ರಂದು ಸುನ್ನಿ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ,ಮಾರ್ಚ್ 8 ರಂದು ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ,ಮಾರ್ಚ್ 9 ರಂದು ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ಮಾರ್ಚ್ 10 ರಂದು ಎಸ್ಸೆಸ್ಸೆಫ್ ಮುಖವಾಣಿ ಇಶಾರ ಪಾಕ್ಷಿಕ ಪ್ರಧಾನ ಸಂಪಾದಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ತರಗತಿಗಳನ್ನು ಮಂಡಿಸಲಿದ್ದಾರೆ.ಎಲ್ಲಾ ರಾಜ್ಯ ಕೌನ್ಸಿಲರ್ಸ್ ಗಳು ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.