janadhvani

Kannada Online News Paper

ಸೌದಿಗೆ ನೇರ ವಿಮಾನಯಾನ ಅನುಮತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು- ಎ.ಪಿ.ಉಸ್ತಾದ್

ಕೋಝಿಕೋಡ್ |ಭಾರತದಿಂದ ಸೌದಿಗೆ ಪ್ರಯಾಣಿಸಲು ನೇರ ವಿಮಾನವನ್ನು ಅನುಮತಿಸಲು ಮಧ್ಯಸ್ಥಿಕೆ ವಹಿಸುವಂತೆ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಔಸಾಫ್ ಸಯೀದ್ ಮತ್ತು ಭಾರತದ ಸೌದಿ ರಾಯಭಾರಿ ಡಾ.ಸೌದ್ ಮುಹಮ್ಮದ್ ಎಂಬವರಿಗೆ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಪತ್ರ ಬರೆದಿದ್ದಾರೆ.ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಾಂತಪುರಂ ಉಸ್ತಾದರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಚರ್ಚೆ ನಡೆಸಿದರು.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಲಸಿಗರ ಮರಳುವಿಕೆಯು ವಿಮಾನ ನಿಷೇಧ ಕಾರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ, ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಹೋಗುವ ಭಾರತೀಯರು ಬಹಳ ಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಇಂತಹಾ ಬಿಕ್ಕಟ್ಟಿನಿಂದಾಗಿ ಅನೇಕ ವಲಸಿಗರು ಸೌದಿ ಅರೇಬಿಯಾಕ್ಕೆ ಹಿಂತಿರುಗದೆ, ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಮತ್ತು ವೀಸಾಗಳ ಅವಧಿ ಮುಗಿಯುವ ಆತಂಕದಲ್ಲಿದ್ದಾರೆ. ಆದ್ದರಿಂದ, ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರು ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಅವಕಾಶ ನೀಡುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕಾಂತಪುರಂ ಒತ್ತಾಯಿಸಿದರು.

error: Content is protected !! Not allowed copy content from janadhvani.com