janadhvani

Kannada Online News Paper

ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ರೈತ ಪರ ರ‍್ಯಾಲಿ

ಮಂಗಳೂರು, ಜ. 26: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಟ್ರಾಕ್ಟರ್ ರ‍್ಯಾಲಿಯನ್ನು ಬೆಂಬಲಿಸಿ ಇಂದು ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತ ಆಯೋಜನೆಯಲ್ಲಿ ರೈತ ಪರ ಪ್ರತಿಭಟನೆ ಮತ್ತು ರ‍್ಯಾಲಿ ನಡೆಯಿತು.

ದ.ಕ.ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ವಿವಿಧ ಪ್ರಜಾ ಪ್ರಭುತ್ವವಾದಿ ಸಂಘಟನೆಗಳ ಸದಸ್ಯರು, ಸಾರ್ವಜನಿಕರು, ಮಹಿಳೆಯರು, ಕಾರ್ಯಕರ್ತರು ಇಂದು ಅಪರಾಹ್ನ ರೈತ ಪರ ಘೋಷಣೆಗಳನ್ನು ಕೂಗಿ ರೈತ ಪರ ತಮ್ಮ ಬೆಂಬಲ ಸೂಚಿಸಿದರು.

ರೈತ ವಿರೋಧಿ ಮೂರು ಕರಾಳ ಶಾಸನಗಳ ಮಾರಕ ಪರಿಣಾಮ ಬಗ್ಗೆ ಪ್ರಮುಖ ಸಂಘಟನೆಗಳ ಮುಖ್ಯಸ್ಥರು ಕಿರು ಪ್ರಾಥಮಿಕ ಭಾಷಣ ನಡೆಸಿದರು. ನಂತರ, ರ‍್ಯಾಲಿಯು ದ.ಕ. ಜಿಲ್ಲಾಧಿಕಾರಿ ಕಚೇರಿಯಿಂದ, ರಾವ್ ಅಂಡ್ ರಾವ್ ವೃತ್ತದ ಮೂಲಕ ಸಾಗಿ ಮಿನಿ ವಿಧಾನ ಸೌಧ ಬಳಿ,ವಿಸ್ತೃತ ಪ್ರತಿಭಟನೆಗೆ ಸಾಗಿದೆ. ರ‍್ಯಾಲಿಯಲ್ಲಿ ಭಾರತದ ದ್ವಜಗಳು, ರೈತ ಪರ ಭಿತ್ತಿ ಪತ್ರ ಗಳು, ಡಾ ಬೀ.ಆರ್.ಅಂಬೇಡ್ಕರ್ ರವರ ಫೋಟೋ ಪ್ರದರ್ಶಿಸಲಾಯಿತು.

error: Content is protected !! Not allowed copy content from janadhvani.com