janadhvani

Kannada Online News Paper

ಭಾರತ-ಸೌದಿ ವಿಮಾನಯಾನ: ಆರೋಗ್ಯ ಸಚಿವರನ್ನು ಭೇಟಿಯಾದ ರಾಯಭಾರಿ

ರಿಯಾದ್:ಭಾರತದಿಂದ ಸೌದಿಗೆ ವಿಮಾನಯಾನ ಸೇವೆಯನ್ನು ನಿಗದಿತ ದಿನಾಂಕಕ್ಕೆ ಮುಂಚಿತವಾಗಿ ಆರಂಭಿಸಬೇಕಾದ ಅಗತ್ಯತೆಗಳ ಕುರಿತು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ ಔಸಾಫ್ ಸಯೀದ್ ಸೌದಿ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಸೌದಿ ಆರೋಗ್ಯ ಸಚಿವ ಡಾ.ತೌಫಿಕ್ ಅಲ್-ರಬಿಯಾ ಅವರೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯನ್ನು ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಭಾರತದಿಂದ ಸೌದಿ ಅರೇಬಿಯಾಕ್ಕೆ ಕೋವಿಡ್ ಲಸಿಕೆ ರಫ್ತು ಮಾಡುವ ಬಗ್ಗೆ ಕೂಡ ಚರ್ಚಿಸಲಾಗಿದೆ ಎಂದು ದೂತಾವಾಸ ತಿಳಿಸಿದೆ.

error: Content is protected !! Not allowed copy content from janadhvani.com